Tuesday 9 April 2013

ಶ್ರೀ ಮದ್ವಾದಿರಾಜೋಪಿ ಜೀವೊತ್ತಮಃ . ಶ್ರೀ  ಸ್ವಾಪ್ನವೃಂದಾವನಾಖ್ಯಾನ ದಂತಹ ಸ್ವಾಪ್ನ ಗ್ರಂಥ ಜಗತ್ತಿನಲ್ಲಿ ಇನ್ನೊಂದಿಲ್ಲ . ಶ್ರೀ ವಾದಿರಾಜರ ನಿಜ ಸ್ವರೂಪ ದರ್ಶನ ಮಾಡಿಸುವ ಗ್ರಂಥ ರತ್ನವದು. ಇದರಲ್ಲಿ ತಿಳಿಸಿರುವ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ . ಅನೇಕ ಘಟನೆಗಳು ನಡೆದುಹೋಗಿವೆ .

ಶ್ಲೋಕ ೭೯.ಅ.೧೩               
                     ವಿಪ್ರ ತೇ ಮತ್ಸುತೇನೈವ ದಾಪಯಿಶ್ಯೇsನ್ನಮುತ್ತಮಂ । 
                     ತದಂತಃ ಪ್ರೇರಯಿತ್ವಾಹಂ ಮದಂತರ್ಯಾಮಿತಾಂ ಸ್ಮರ ॥ 

ಹೇ ವಿಪ್ರ ! ನನ್ನ ಭಕ್ತನೋಬ್ಬನಿಂದಲೇ , ಅವನ ಮನಸ್ಸಿನಲ್ಲಿದ್ದು ಅವನಿಗೆ ಪ್ರೇರಣೆ ಮಾಡಿ ನಾನು ( ಪರ್ಯಾಯ ಕಾಲದಲ್ಲಿ ಅನ್ನ  ಕಾಲಕ್ಕೆ ಅನುಕೂಲವನ್ನು ) ಕೊಡಿಸುತ್ತೇನೆ . ನೀನು ನನ್ನ ಅಂತರ್ಯಾಮಿತ್ವ ಮಹಾತ್ಮೆಯನ್ನು ಭಕ್ತಿಯಿಂದ ತಿಳಿಸು.

೧ ಪರ್ಯಾಯ ಕಾಲಕ್ಕೆ ಭಕ್ತನೋಬ್ಬನಿಂದ ಧನ ಪ್ರಾಪ್ತಿಯಾಗುವದು ಎಂಬ ಭವಿಷ್ಯವಾಣಿ ಹೇಳಲ್ಪಟ್ಟಿದೆ. ಮೈಸೂರು ಮಹಾರಾಜರು ಬಹಳವಾಗಿ ಕೊಟ್ಟಿದ್ದಾರೆ .
  ಹೀಗೆ ಆಖ್ಯಾನದಲ್ಲಿ  ಬಹಳ ವಿಚಾರಗಳು ಪ್ರಸ್ತುತವಾಗಿವೆ . ಆದ್ದರಿಂದಲೇ ರಾಜರು ಇದನ್ನು ಕಲ್ಲಿನಿಂದ ಕೆತ್ತಿಡಬೇಕು ಎಂದು ಹೇಳಿದ್ದಾರೆ . ಅಂತಹ ಪವಿತ್ರತಮ ಗ್ರಂಥ ಈ ಆಖ್ಯಾನ. 

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...