Tuesday 2 June 2020

ಶ್ರೀಪಾದರಾಜರು

ಶ್ರೀಪಾದರಾಜರು ( ಶ್ರೀಲಕ್ಷ್ಮೀನಾರಾಯಣ ತೀರ್ಥರು) 

ತಂ ವಂದೇ ನರಸಿಂಹತೀರ್ಥನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ ಧ್ಯಾಯಂತಾಂ ಮನಸಾ ನೃಸಿಂಹಚರಣಂ ಶ್ರೀಪಾದರಾಜಂ ಗುರುಂ॥

ಆಶ್ರಮನಾಮ: ಶ್ರೀಲಕ್ಷ್ಮೀನಾರಾಯಣ ತೀರ್ಥರು
ಆಶ್ರಮ ಗುರುಗಳು: ಶ್ರೀಸ್ವರ್ಣವರ್ಣತೀರ್ಥರು 
ವಿದ್ಯಾಗುರುಗಳು:  ಶ್ರೀ ವಿಬುಧೆಂದ್ರ ತೀರ್ಥರು (ಶ್ರೀಕವೀಂದ್ರ ತೀರ್ಥ ಪರಂಪರಾ ಭೂಷಾಮಣಿ) 
ಆಶ್ರಮ ಶಿಷ್ಯರು: ಶ್ರೀಹಯಗ್ರೀವತೀರ್ಥರು 
ಪರಂಪರೆ:
 ಶ್ರೀಪಾದರಾಜ ಮಠ : ಶ್ರೀಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಮಾಧ್ವಯತಿಕುಲ ತಿಲಕ ಶ್ರೀಪದ್ಮನಾಭ ತೀರ್ಥರಿಂದ ಪ್ರವರ್ತಿತವಾದ, ಶ್ರೀಲಕ್ಷ್ಮಿಧರ ತೀರ್ಥ ಶ್ರೀಪಾದರಿಂದ ಮುಂದುವರೆದ ಪರಂಪರೆ. 
ಪೂರ್ವಾಶ್ರಮ ನಾಮ: ಲಕ್ಷ್ಮೀನಾರಾಯಣ 
ವೃಂದಾವನ ಸ್ಥಳ: ಮುಳುಬಾಗಿಲು


ಪೂರ್ವಾಶ್ರಮ - ಸಂನ್ಯಾಸ: 

ಬಾಲಕನಾಗಿದ್ದಾಗಲೇ ಅಪ್ರತಿಮ ಮಾತಿನ ವೈಖರಿಯಿಂದ ಶ್ರೀಸ್ವರ್ಣವರ್ಣತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾಗಿ ಅವರಿಂದಲೇ  ಸಂನ್ಯಸ್ತರಾಗಿ ಬಾಲಯತಿಗಳಾಗಿ ಕಂಗೊಳಿಸಿದವರು ಶ್ರೀಲಕ್ಷ್ಮೀನಾರಾಯಣತೀರ್ಥರು..

ವಿದ್ಯಾಗುರುಗಳು- ವಿದ್ಯಾಭ್ಯಾಸ: 

ಸಂನ್ಯಸ್ತರಾದ, ಚತುರರಾದ ನೂತನ ಬಾಲಯತಿಗಳನ್ನು ಅಪ್ರತಿಮ ವಿದ್ವಾಂಸರನ್ನಾಗಿ ಮಾಡಬೇಕು ಎಂದು ಅಪೇಕ್ಷೇಯುಳ್ಳ ಶ್ರೀಸ್ವರ್ಣವರ್ಣತೀರ್ಥರು ಬಾಲಯತಿಗಳನ್ನು ಶ್ರೀವಿಬುಧೇಂದ್ರತೀರ್ಥರ ಹತ್ತಿರ ಕಳುಹಿಸುತ್ತಾರೆ.

ಶ್ರೀಮನ್ಮಧ್ವಾಚಾರ್ಯರ- ಶ್ರೀಪದ್ಮನಾಭತೀರ್ಥರ- ಶ್ರೀ ಜಯತೀರ್ಥರ ದಿವ್ಯ ಪರಂಪರೆಯನ್ನು ಬೆಳಗಿದ , ಶ್ರೀಮಧ್ವಾಚಾರ್ಯರ ಸಿದ್ಧಾಂತವನ್ನೇ ತಮ್ಮ ಸಾರಸರ್ವಸ್ವವನ್ನಾಗಿಸಿಕೊಂಡಿದ್ದವರು ಶ್ರೀವಿಬುಧೇಂದ್ರತೀರ್ಥರು. ಕೇರಲದಿಂದ ಹಿಮಾಲಯಪರ್ಯಂತ ದುರ್ವಾದಿಗಳನ್ನು ನಿರಾಕರಿಸಿದವರು, ದುರ್ವಾದಿವೀಘಟನ ದೀಕ್ಷಾಬದ್ಧರಾದ ಮಾಡುವ ಮಾಧ್ವಯತೀಶ್ವರರ ಸೇನಾನಾಯಕನಂತೆ ಕಂಗೊಳಿಸಿದವರು. ಆಗಿನ ಕಾಲದಲ್ಲಿ ವಿದ್ಯೆಗೆ ತವರಾದ ಮಹಾನ್ ಮೇಧಾವಿಗಳು.

ಶ್ರೀವಾದೀಂದ್ರತೀರ್ಥರು, ಶ್ರೀಪಾದರಾಜರ ವಿದ್ಯಾಗುರುಗಳಾದ ಶ್ರೀವಿಬುಧೇಂದ್ರತೀರ್ಥರನ್ನು ಸ್ತುತಿಸುವಾಗ,

"ಅಮೀಲಕ್ಷ್ಮೀನಾರಾಯಣಮುನಿಮುಖಾಶೇಷಯತಯಃ
ಯತೋ ವಿದ್ಯಾಮೃದ್ಧಾಮಧಿಜಗುರುಧಿಷ್ಠಾನಪತಯಃ |
ಮುಹುರ್ಮೋಹೋದಂಚತ್ಪರಮತಪರೀಭಾವಚತುರಃ
ಸ ಮೇ ಭೂಯಃ ಶ್ರೇಯೋ ದಿಶತು ವಿಬುಧೇಂದ್ರವ್ರತಿಪತಿಃ ||

ಎಂದು ಶ್ರೀಪಾದರಾಜರು ಶ್ರೀವಿಬುಧೇಂದ್ರರ ವಿದ್ಯಾಶಿಷ್ಯರು ಎಂದು ವಿಶೇಷವಾಗಿ ಸ್ಮರಿಸಿದ್ದಾರೆ.

ಶ್ರೀವಿಬುಧೆಂದ್ರತೀರ್ಥರಲ್ಲಿ ಸಮಸ್ತ ದ್ವೈತವೇದಾಂತವನ್ನು ಅಭ್ಯಸಿಸಿ, ಗುರುಗಳಂತೆಯೇ ಅಖಂಡ ವಿದ್ಯಾಪಾರಂಗತರಾಗಿ ವಿದ್ಯಾವ್ಯಾಸಂಗ ಮುಗಿಸಿ ಅವರ ಎತ್ತರದ ವ್ಯಕ್ತಿತ್ವದ ದ್ಯೋತಕವಾಗಿ "ಶ್ರೀಪಾದರಾಜರು" ಎಂಬ ಪ್ರಶಸ್ತಿಯನ್ನು ಪಡೆದವರಾಗಿ ಶ್ರೀಸ್ವರ್ಣವರ್ಣತೀರ್ಥರ ಹತ್ತಿರ ಬರುತ್ತಾರೆ.

ಇದನ್ನೇ ಶ್ರೀವಾದೀಂದ್ರ ಶ್ರೀಮಚ್ಚರಣರು ತಮ್ಮ 'ಶ್ರೀರಾಘವೇಂದ್ರಮಠಗತಾರ್ಚಾಗತಿಕ್ರಮ'ದಲ್ಲಿ, ಶ್ರೀಮದ್ವಿಬುಧೇಂದ್ರತೀರ್ಥರ ಬಗ್ಗೆ ಹೇಳುವಾಗ,

ಲಕ್ಷ್ಮೀನಾರಯಣಮುನಿಃ ವ್ಯಾಸದೇಶಿಕದೇಶಿಕಃ |
ಯಸ್ಮಾತ್ ಶ್ರೀಪಾದರಾಜಾಖ್ಯೋ ಹೃದ್ಯಗೀಷ್ಟಾಖಿಲಾಗಮಾನ್ ||
                                                                               - ಅ.ಗ.ಕ್ರ - 5

ಎಂದು ಗುರುಶಿಷ್ಯರ ವಿದ್ಯಾಸಂಬಂಧವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ಸಂಸ್ಥಾನಾಧಿಪತ್ಯ ಹಾಗೂ ವಿಶ್ವವಿದ್ಯಾನಿಲಯ ಸ್ಥಾಪನೆ : 

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...