Friday 9 August 2013

"ಶ್ರೀಮನ್ಯಾಯಸುಧಾ" ಪಾಠ

 ।। ಶ್ರೀಮನ್ಮೂಲರಾಮೋ ವಿಜಯತೆ ।।                                             ।। ಶ್ರೀ ಗುರುರಾಜೋ ವಿಜಯತೆ ।।
ಜಗದ್ಗುರು ಶ್ರೀಮನ್ಮಧ್ವಾಚಾರ್ಯ  ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ-ವಿದ್ಯಾ ಮಠದ ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರರಾದ ಶ್ರೀ ೧೦೦೮ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ೧೦೦೮ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಿಕ ಗುರುಗಳಾದ ಶ್ರೀ ಟೀಕಾಕೃತ್ಪಾದರ ಮೇರು ಕೃತಿ "ಶ್ರೀಮನ್ಯಾಸುಧಾ" ಗ್ರಂಥದ ಪಾಠವನ್ನು , ಶ್ರೀ ರಾಘವೇಂದ್ರ ಗುರುಸಾರ್ವಭೌಮರ "ಪರಿಮಳ" ಸಮೇತ ೨೫ ವ್ಯಾಖ್ಯಾನಗಳೊಂದಿಗೆ ಶ್ರೀ ಮಂತ್ರಾಲಯ ಪ್ರಭುಗಳ ಹಾಗು ಶ್ರೀಮದ್ವಾದೀಂದ್ರ ತೀರ್ಥ ಗುರುಸರ್ವಭೌಮರ ಹಾಗು ಶ್ರೀ ಸುಧರ್ಮೇಂದ್ರ ತೀರ್ಥರು ಇತ್ಯಾದಿ ತಪಸ್ವೀ ಯತಿವರೆಣ್ಯರ ದಿವ್ಯ ಸನ್ನಿಧಾನವಾದ ಮಂತ್ರಾಲಯ ಕ್ಷೇತ್ರದಲ್ಲಿ , ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ೧೨ ವಿದ್ಯಾರ್ಥಿಗಳಿಗೆ ಪ್ರಾರಂಭಿಸಿದರು..ಕುಂದಾಪುರ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿಗಳಾದ ಶ್ರೀ ೧೦೦೮ ಶ್ರೀ ಲಕ್ಷ್ಮೀಂದ್ರ ತೀರ್ಥರು ಹಾಗು ಶ್ರೀ ವಿಶ್ವಗುರುಪ್ರಿಯ ತೀರ್ಥರು ಪಾಠದ ಸಮಯದಲ್ಲಿ ಉಪಸ್ಥಿತರಿದ್ದು ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಆಶೀರ್ವಾದವನ್ನು ಮಾಡಿದರು. ಈ ಹಿಂದೆ ಇದೇ ಸಿದ್ಧ ಕ್ಷೇತ್ರದಲ್ಲಿ ೨೫ ವ್ಯಾಖ್ಯಾನ ಸಮೇತವಾಗಿ ಶ್ರೀಮನ್ಯಾಯಸುಧಾ ಗ್ರಂಥದ ಮಂಗಳವನ್ನು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಾಶ್ರಮದಲ್ಲಿ ಮಾಡಿದನ್ನು ಸ್ಮರಿಸಬಹುದು.. 




"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...