Sunday 28 October 2012

ಮಿತಭಾಷೀ ಮ೦ತ್ರಾಲಯ ಮುನಿವರೇಣ್ಯರು
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಅಡಕವಾದ ಶ್ರೀಮಧ್ವರಾಮಾಯಣದಲ್ಲಿ "ಸು೦ದರಕಾ೦ಡ" ದ ಸ೦ಗ್ರಹವನ್ನು ಶ್ರೀಮಧ್ವಾಚಾರ್ಯರು 50 ಶ್ಲೋಕಗಳಲ್ಲಿ ಸ೦ಗ್ರಹಿಸಿದ ಏಳನೇ ಅಧ್ಯಾಯವು ಪರಮಮ೦ಗಳಕರವೆ೦ದು ಪ್ರಸಿದ್ಧಿ ಇದೆ. ಈ ಏಳನೇ ಅಧ್ಯಾಯವನ್ನು ಪಠಿಸುತ್ತ ಶ್ರೀಮುಖ್ಯಪ್ರಾಣದೇವರಿಗೆ ಅಭಿಷೇಕ ಮಾಡುವ ಸ೦ಪ್ರದಾಯವು ಇ೦ದೂ ರೂಢಿಯಲ್ಲಿದೆ.
ಇ೦ಥ 50 ಶ್ಲೋಕಗಳ ಸಾರಸ೦ಗ್ರಹವನ್ನು (ಶ್ರೀರಾಯರು) ಶ್ರೀಭಾವಸ೦ಗ್ರಹಕಾರರು ಒ೦ದೇ ಶ್ಲೋಕದಲ್ಲಿ ಸ೦ಕ್ಷಿಪ್ತವಾಗಿ ವರ್ಣಿಸಿದ್ದಾರೆ. ಸ್ಥಾಲೀಪುಲಾಕ ನ್ಯಾಯದಿ೦ದ ಶ್ರೀರಾಯರ ಸ೦ಗ್ರಹ ಚಾತುರ್ಯವನ್ನು ಭಾವುಕರು ತಿಳಿಯಬಹುದಾಗಿದೆ.
"ಯಸ್ಯ ಶ್ರೀಹನುಮಾನ್ ಅನುಗ್ರಹಬಲಾತ್ ತೀರ್ಣಾ೦ಬುದ್ಧಿರ್ಲೀಲಯಾ |
ಲ೦ಕಾ೦ ಪ್ರಾಪ್ಯ ನಿಶಾಮ್ಯ ರಾಮದಯಿತಾ೦ ಭ೦ಕ್ತ್ವಾ ವನ೦ ರಾಕ್ಷಸಾನ್ ||
ಅಕ್ಷಾದೀನ್ ವಿನಿಹತ್ಯ ವೀಕ್ಷ್ಯ ದಶಕ೦, ದಗ್ಧ್ವಾ ಪುರೀ೦ ತಾ೦ ಪುನಃ |
ತೀರ್ಣಾಬ್ಧಿಃ ಕಪಿಭಿರ್ಯುತೋ ಯಮನಮತ್ ತ೦ ರಾಮಚ೦ದ್ರ೦ ಭಜೇ ||
ಯಸ್ಯ ಶ್ರೀಹನುಮಾನ್..............ರ್ಲೀಲಯಾ " ಎ೦ಬ ಒ೦ದೇ ವಾಕ್ಯದಿ೦ದ "ರಾಮಾಯ ಶಾಶ್ವತಸುವಿಸ್ತೃತ.....ವಿವೇಶ ಲ೦ಕಾ೦" ಶ್ಲೋಕಗಳ ಸಾರವನ್ನು ಕಾಣಬಹುದು.
ಷಡ್ಗುಣೈಶ್ವರ್ಯಶಾಲಿಯಾದ, ಬಲವೀರ್ಯಗಳ ಸಾಗರನಾದ ಶ್ರೀರಾಮನನ್ನು ಶ್ರೀಹನುಮ೦ತನು ನಮಿಸಿದನು. ಮಹೇ೦ದ್ರಪರ್ವತದಿ೦ದ ಹಾರಿದ ಅರ್ಭಟಕ್ಕೆ ಸಮುದ್ರತೀರದ ಮರಗಳು ಸಮುದ್ರದಲ್ಲಿರುವ ಜಲಚರ ಪ್ರಾಣಿಗಳು ಬಲಾತ್ಕಾರದಿ೦ದ ಹನುಮ೦ತನನ್ನು ಹಿ೦ಬಾಲಿಸಿದವು. ಮಾರ್ಗದಲ್ಲಿ ಮೈನಾಕ ಪರ್ವತಾಭಿಮಾನಿಯು ಶ್ರೀಹನುಮ೦ತದೇವರಿಗೆ ವಿಶ್ರಾ೦ತಿ ಪಡೆಯಲು ವಿಜ್ಞಾಪಿಸಿದ್ದು, ಅವನ ಭಾವನೆ ಮನ್ನಿಸಿ ವಿಶ್ರಾ೦ತಿ ಪಡೆಯದೆ ಅವನನ್ನು ಅಪ್ಪಿ ಅನುಗ್ರಹಿಸಿದ್ದು, ಸುರಸಾ ಎ೦ಬ ಕನ್ನಿಕೆಯನ್ನು ಸುರಕ್ಷಿತವಾಗಿ ನು೦ಗಿ ಬಿಟ್ಟು ತನ್ನ ಬಲವನ್ನು ಪರೀಕ್ಷಿಸಿದ ದೇವತೆಗಳಿ೦ದ ಸನ್ಮಾನಿತನಾದದ್ದು. ಮು೦ದೆ ಬ್ರಹ್ಮದೇವರ ವರ ಪಡೆದ ಅಕ್ಷಕುಮಾರನನ್ನು ಸ೦ಹರಿಸಿ ಲ೦ಕಾಭಿಮಾನಿಯಾದ ಲ೦ಕೇಶ್ವರನನ್ನು ಜಯಿಸಿ ಲ೦ಕಾಪಟ್ಟಣವನ್ನು ಪ್ರವೇಶ ಮಾಡಿದ ವಿಷಯವನ್ನು ಶ್ರೀಗುರುವರೇಣ್ಯರು ಒ೦ದೇ ವಾಕ್ಯದಲ್ಲಿ ಸ೦ಗ್ರಹಿಸಿದ್ದಾರೆ. "ಲ೦ಕಾ೦ ಪ್ರಾಪ್ಯ ನಿಶಾಮ್ಯ ರಾಮದಯಿತಾ೦" ಎ೦ಬ ಪದಾವಳಿಯಿ೦ದ. "ಮಾರ್ಗಮಾಣೋ ಬಹಿಶ್ಚಾ೦ತ.....ದದರ್ಶ ಶಿ೦ಶುಪಾವೃಕ್ಷಮುಲಸ್ಥಿತರಮಾಕೃತಿಮ್" ಎ೦ಬ ಶ್ರೀಮದಾಚಾರ್ಯರ ಅಭಿಪ್ರಾಯವನ್ನು ಕೇವಲ ನಾಲ್ಕು ಪದಗಳಿ೦ದ ಪ್ರಭುಗಳು "ನಿಶಾಮ್ಯ" ಎ೦ಬ ಪದದಿ೦ದ ಶ್ರೀರಾಮನ ಸ೦ದೇಶ ಮತ್ತು ಮುದ್ರಿಕೆಯ ಅ೦ಗುಲೀಯಕವನ್ನು ಕೊಟ್ಟು ಚೂಡಾಮಣಿಯನ್ನು ಸ೦ಗ್ರಹಿಸಿದನು. ರಾಮದೂತನು ತನ್ನ ಆಗಮನ ಪ್ರಕಟಿಸಲು ಇಚ್ಚಿಸಿದನು. (ಆತ್ಮಾವಿಷ್ಕರಣೇ ಚಿತ್ತ೦ ಚಕ್ರೇ ಮತಿಮತಾ೦ ವರಃ) ಎ೦ಬ ವಿಷಯವನ್ನು ಶೇಷಪೂರ್ತಿಯಾಗಿಟ್ಟುಕೊಳ್ಳಬೇಕು. "ಭು೦ಕ್ತ್ವಾ ವನ೦" ಎ೦ಬ ಪದದಿ೦ದ "ಅಥ ವನಮಖಿಲ೦ ತತ್ ರಾವಣಸ್ಯಾವಲು೦ಪ್ಯ ಕ್ಷಿತಿರುಹಮಿಮಮೇಕ೦ ವರ್ಜಯಿತ್ವಾಽಶು ವೀರಃ" ಎ೦ಬ ಶ್ರೀಮದಾಚಾರ್ಯರ ಉಕ್ತಿಯನ್ನು ಸ೦ಗ್ರಹಿಸಿದ್ದಾರೆ೦ದು ತಿಳಿಯುವುದು. "ಅಕ್ಷಾದೀನ್ ರಾಕ್ಷಸಾನ್ ವಿನಿಹತ್ಯ" ಎ೦ಬ ಪದಗಳಿ೦ದ ರಾವಣನು ಹನುಮ೦ತನನ್ನು ನಿಗ್ರಹಿಸಲು ಕಳಿಸಿದ 80 ಕೋಟಿ ಸೇನಾಪತಿಗಳನ್ನು, 80 ಸಾವಿರ ಸೇನಾಗ್ರೇಸರನ್ನೂ, 7 ಮ೦ತ್ರಿಪುತ್ರರನ್ನು, ರಾವಣನ ಕಿರಿಯ ಮಗನಾದ ಅಕ್ಷಕುಮಾರನನ್ನು ಸ೦ಹರಿಸಿದ ಶ್ರೀಹನುಮ೦ತದೇವರ ಪರಾಕ್ರಮವನ್ನು ಶ್ರೀಮತ್ಪರಿಮಳಾಚಾರ್ಯರು ಸೂಚಿಸಿದ್ದಾರೆ. "ವೀಕ್ಷ್ಯ ದಶಕ೦" ಎ೦ಬ ಪದಗಳಿ೦ದ ಇ೦ದ್ರಜಿತನು ಪ್ರಯೋಗಿಸಿದ ಬ್ರಹ್ಮಾಸ್ತ್ರಕ್ಕೆ ವಶರಾದ೦ತೆ ನಟಿಸಿ ರಾವಣನನ್ನು ಸಭೆಯಲ್ಲಿ ಕ೦ಡು ಅವನು ಕೇಳಿದ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಧೈರ್ಯದಿ೦ದ ಉತ್ತರಿಸಿದ ಶ್ರೀಹನುಮ೦ತದೇವರ ಮಹಿಮೆಯನ್ನು ಶ್ರೀರಾಯರು ಸೂಚಿಸಿದ್ದಾರೆ. "ದಗ್ಧ್ವಾ ಪುರೀ೦ ತಾ೦" ಎ೦ಬ ಪದಗಳಿ೦ದ ಶ್ರೀಗುರುವರೇಣ್ಯರು, ಅವಮಾನಿತ ರಾವಣನು ಶ್ರೀಹನುಮ೦ತದೇವರ ಬಾಲಕ್ಕೆ ಹಚ್ಚಿದ ಬೆ೦ಕಿಯಿ೦ದ ರಾವಣನನ್ನು ಲೆಕ್ಕಿಸದೆ ಸಮಸ್ತ ಲ೦ಕಾಪಟ್ಟಣವನ್ನು ಸುಟ್ಟ "ದದಾಹ ಚಾಖಿಲಾ೦ ಪುರೀ೦ ಸ್ವಪುಚ್ಛಗೇನ ವಹ್ನಿನಾ" ಎ೦ಬ ಶ್ರೀಮದಾಚಾರ್ಯರ ಉಕ್ತಿಯನ್ನು ಭಾವಸ೦ಗ್ರಹಕಾರರು ಸ೦ಗ್ರಹಿಸಿದ್ದಾರೆ.
"ತೀರ್ಣಾಬ್ಧಿಃ ಕಪಿಭಿರ್ಯುತೋ ಯಮನಮತ್" ಎ೦ಬ ಪದಾವಳಿಯಿ೦ದ "ರಾಮ೦ ಸುರೇಶ್ವರಮಗಣ್ಯಗುಣಾಭಿರಾಮ೦ ಸ೦ಪ್ರಾಪ್ಯ ಸರ್ವಕಪಿವೀರವರೈಃ ಸಮೇತಃ | ಪ್ರಣತಿಮಸ್ಯ ಚಕಾರ ಭಕ್ತ್ಯಾ ||" ಮತ್ತು "ರಾಮೋಽಪಿ........ಪರಮಾಭಿತುಷ್ಟಃ ||" ಎ೦ಬ ಶ್ರೀಮದಾಚಾರ್ಯರ ಉಕ್ತಿಯನ್ನು ಶ್ರೀಗುರುರಾಜರು ಸು೦ದರವಾಗಿ ಸ೦ಗ್ರಹಿಸಿದ್ದಾರೆ. ವಿಸ್ತರಿಸಿ ವಿವರಿಸುವುದಕ್ಕಿ೦ತ, ವಿಸ್ತಾರವನ್ನು ಸ೦ಕ್ಷೇಪಿಸಿ ಹೇಳುವ ಕಷ್ಟಕರ ಕಾರ್ಯವನ್ನು ಶ್ರೀಭಾವಸ೦ಗ್ರಹಕಾರರು ಸು೦ದರವಾಗಿ ಮಾಡಿದ್ದನ್ನು ಗಮನಿಸಿದಾಗ ಶ್ರೀಗುರುವರೇಣ್ಯರ ಪಾ೦ಡಿತ್ಯ ಕೌಶಲ್ಯಗಳು ಸ್ಪಷ್ಟವಾಗಿ ಕ೦ಡುಬರುತ್ತವೆ.
"ಗುರುರಾಘವೇ೦ದ್ರವಾಗ್ದೇವತಾಸರಿದಮು೦ ವಿಮಲೀಕರೋತು"

|| ಶ್ರೀರಾಘವೇ೦ದ್ರತೀರ್ಥಗುರ್ವ೦ತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು ||

ಸ೦ಗ್ರಹ: ಪ. ಕೃಷ್ಣಮೂರ್ತಿ ಕಲಕೋಟಿ, ಧಾರವಾಡ

Sundara kaanda in one sloka (extracted from “Srimanmahaabhaaratha Taatparya nirnaya bhaavasangraha” By Sri Raaghavendra Swaamy contains totally 5202 verses in 32 chapters and this is the seventh sloka).
Raghavendra Swami wrote just 4 lines which is equivalent to the whole Sundarakaandam which comprises of 2885 verses spread in 68 chapters.

“yesya shree hanumaan anugraha balaath – theerNaam – buDhirleelayaa
lankaam praapya nishaamya raamadhayithaam Bhangktvaa vanam raakShasaan!
akShaadheen vinihatya veekShya dhashakam dhagDhvaa pureem thaam punaha
theerNaabDhihi kapiBhiryutho yamanamath tham raamachandram Bhaje !!”

By the strength of whose grace, Sri Hanuman play-fully crossed the sea, Reached Lanka, met Sita Devi,Destroyed the garden called Ashoka,
Killed Akshakumar and other rakshasas,
Met Ravana, burnt down the city of lanka,
Crossed the sea again, returned with the
Group of monkeys which had stayed behind at the
Mountain of Mahendra and paid obeisance unto the
lotus-like feet?
I worship Sri Ramachandra of above repute.

Source: Madhwasaints.wordpress.com

Saturday 27 October 2012

MADHWA MATHAS AND THEIR DEITES

source : http://www.facebook.com/pages/Sri-Madhwacharya/146259025401528

The 24 Mathas (Along With Their Presiding Deites) Of The Dvaita Order,A System Established By Jagadguru Sriman Madhwacharya In The 13th Century. The Kannada Madhwa Mathas

1. Mantralaya Sri Raghavendra Swami Matha (ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ) -> Sri Moola Rama

2. Sri Uttaradi Matha (ಶ್ರೀ ಉತ್ತರಾದಿ ಮಠ) -> Sri Digvijaya Rama

3. Mulbagalu Sri Sripadaraja Matha (ಮುಲಬಾಗಿಲು ಶ್ರೀ ಶ್ರೀಪಾದರಾಜ ಮಠ) ->Sri Gopinatha Vittala

4. Sosale Sri Vyasaraja Matha (ಸೋಸಲೆ ಶ್ರೀ ವ್ಯಾಸರಾಜ ಮಠ) -> Gopala Krishna

5. Sagarakatte Sri Vyasaraja Matha (ಸಾಗರಕಟ್ಟೆ ಶ್ರೀ ವ್ಯಾಸರಾಜ ಮಠ) -> Sri Krishna

6. Kundapura Sri Vyasaraja Matha (ಕುಂದಾಪುರ ಶ್ರೀ ವ್ಯಾಸರಾಜ ಮಠ) -> Sri Vittala

7. Sri Madhva Kanva Matha (ಶ್ರೀ ಮದ್ವ ಕಣ್ವ ಮಠ) -> Sri Vittala Krishna And Venu Gopala Krishna

8. Tambehalli Sri Madhava Tirtha Matha (ತಾಮ್ಬೇಹಳ್ಳಿ ಶ್ರೀ ಮದ್ವ ತೀರ್ಥ ಮಠ) -> Sri Veera Rama

9. Kudli Sri Arya Akshobhya Tirtha Matha (ಕೂಡ್ಲಿ ಶ್ರೀ ಆರ್ಯ ಅಕ್ಷೋಭ್ಯ ತೀರ್ಥ ಮಠ) -> Sri Vaikunta Rama

10. Baligaru Sri Arya Akshobhya Tirtha Matha (ಬಳಿಗಾರು ಶ್ರೀ ಆರ್ಯ ಅಕ್ಷೋಭ್ಯ ತೀರ್ಥ ಮಠ) -> Sri Rama

11. Sri Bhimanakatte Matha (ಶ್ರೀ ಭೀಮನ ಕಟ್ಟೆ ಮಠ) -> Sri Rama

The Madwa Mathas Belonging To Gowd Saraswath Brahman Samaj – Konkani Mathas

12. Shree Kashi Math Samsthan (ಶ್ರೀ ಕಾಶಿ ಮಠ ಸಂಸ್ಥಾನ) – Sri Vedavyasa Raghupathi Narasimha

13. Shri Partagali Jeevottam Mutt (ಶ್ರೀ ಪರ್ತ್ಹೊಗಲಿ ಜೀವೋತ್ತಮ ಮಠ) – Sri Ramdev Veer Vithal

The Ashta Mathas Of Udupi – Tuluva Region Mathas :

14. Palimaru Matha (ಶ್ರೀ ಪಲಿಮಾರ್ ಮಠ)-> Sri Rama With Sita Lakshmana

15. Sri Adamaru Matha (ಶ್ರೀ ಅದಮಾರ್ ಮಠ) -> Chaturbhuja Kaliya Mardhana Krishna

16. Sri Krishnapura Matha (ಶ್ರೀ ಕೃಷ್ಣಾಪುರ ಮಠ) -> Dvibhuja Kaliya Mardhana Krishna

17. Sri Puttige Matha (ಶ್ರೀ ಪುತ್ತಿಗೆ ಮಠ) -> Sri Vittala

18. Sri Shirooru Matha (ಶ್ರೀ ಶಿರೂರ್ ಮಠ) -> Sri Vittala

19. Sode Sri Vadiraja Matha (ಸೋದೆ ಶ್ರೀ ವಾದಿರಾಜ ಮಠ)-> Sri Bhu Varaha

20. Sri Kaniyooru Matha (ಶ್ರೀ ಕಾಣಿಯೂರು ಮಠ) -> Sri Narasimha

21. Pejavara Sri Adokshaja Tirtha Matha (ಪೇಜಾವರ ಶ್ರೀ ಅಕ್ಷೋಭ್ಯ ತೀರ್ಥ ಮಠ) -> Sri Vittala

The Other Madhwa Mathas Of Tuluva Region

22. Sri Bhandarakeri Matha (ಶ್ರೀ ಬಂಡಾರಕೇರಿ ಮಠ) -> Sita Rama With Lakshmana

23. Sri Subramanya Matha (ಶ್ರೀ ಸುಬ್ರಮಣ್ಯ ಮಠ) -> Sri Sampusta Narasimha

24. Sri Chitrapura Matha (ಶ್ರೀ ಚಿತ್ರಾಪುರ ಮಠ) -> Sri Rukmini - Satyabhama Sahita Sri Krishna.

Wednesday 24 October 2012

श्रीमद्राभिरामामितमहिमपदप्रौढपाथोरुहाली
कृष्णानिष्टामितक्ष्मापरिवृढपटलीपाटनैक प्रवीणः |
वेदव्यासोपदेशाधिकसमधिगतानन्तवेदान्तभावो 
भूयत्कीशावनीशव्रतितनुरनिलः श्रेयसे भूयसे नः  || 

ಶ್ರೀಮದ್ರಾಮಾಭಿರಾಮಾಮಿತಮಹಿಮಪದಪ್ರೌಢಪಾಥೋರುಹಾಲಿ:
ಕೃಷ್ಣಾನಿಷ್ಟಾಮಿತಕ್ಷ್ಮಾಪರಿವ್ರುಢಪಟಲೀಪಾಟನಿಕಪ್ರವೀಣಃ |
ವೇದವ್ಯಾಸೋಪದೇಶಾಧಿಕಸಮಧಿಗತಾನಂತವೇದಾಂತಭಾವೋ 
ಭೂಯತ್ಕೀಷಾವನೀಶವ್ರುತಿತನುರನಿಲಃ ಶ್ರೇಯಸೇ ಭೂಯಸೇ ನಃ ||

ಶ್ರೀ ವಾದೀಂದ್ರರು ತಮ್ಮ ಗುರುಗುಣ ಸ್ತವನದಲ್ಲಿ ಹೇಳಿರುವ ಅಮೃತವಚನ-- 
ಕಾಂತಿಯುತವಾದ ಶ್ರೀರಾಮಚಂದ್ರನ ಪಾದಕಮಲಗಳಲ್ಲಿ ಭ್ರಮರದಂತಿರುವ , ಶ್ರೀಕೃಷ್ಣನ ಶತ್ರುಗಳಾದ ಅಸಂಖ್ಯ ರಾಜರುಗಳ ಸಮೂಹವನ್ನು ನಾಶ ಮಾಡುವಲ್ಲಿ ಅತ್ಯಂತ ಸಮರ್ಥನಾದ , ಶ್ರೀ ವೇದವ್ಯಾಸರ ಉಪದೇಶಗಳಿಂದ ಅನಂತ ವೇದ ಹಾಗು ಉಪನಿಷತ್ತುಗಳ ಮತ್ತು ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಮೀಮಾಂಸಾ ಶಾಸ್ತ್ರದ ಭಾವವನ್ನು ಚೆನ್ನಾಗಿ ತಿಳಿದಿರುವ ಶ್ರೀ ವಾಯ್ವವತಾರಿಗಳಾದ ಶ್ರೀ ಹನುಮ - ಭೀಮ - ಮಧ್ವ ರೂಪಗಳಿಂದ ಅವತರಿಸಿದ ಮುಖ್ಯಪ್ರಾಣ ನಮಗೆ ಮೊಕ್ಷಾದಿಗಳನ್ನು ಕರುಣಿಸಲಿ . 

ಇದನ್ನು ನಾವು ಅರ್ಥ ಸಮೇತ ಶ್ಲೋಕವನ್ನು ಪಠಿಸಿ ಹರಿ ವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ .

Tuesday 23 October 2012

ಶ್ರೀ 1008 ಶ್ರೀ ಸುಕೃತೀಂದ್ರ ತೀರ್ಥರ 100 ನೆ ಆರಾಧನ

ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಶ್ರೀ 1008 ಶ್ರೀ ಸುಕೃತೀಂದ್ರ ತೀರ್ಥರ 100 ನೆ ಆರಾಧನ ಮೊಹೋತ್ಸವ ಇಂದಿನಿಂದ ನಂಜನಗೂಡಿನಲ್ಲಿ ಶ್ರೀ ಸುಯತೀಂದ್ರ ತೀರ್ಥರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಲಿದೆ . ಶ್ರೀ ಸುಕೃತೀಂದ್ರ ತೀರ್ಥರ ಬಗೆಗೆಗಿನ ಪರಿಚಯಾತ್ಮಕ ಲೇಖನ ಇದು .
     
         सुविद्वत्कमलोल्लास मार्ताण्ड सुगुणाकरम् |
          सच्छास्त्रासक्त हृदयं सुकृतीन्द्र गुरुं भजे ||

        ಸುವಿದ್ವತ್ಕಮಲೋಲ್ಲಾಸ ಮಾರ್ತಾಂಡ ಸುಗುಣಾಕರಂ |
        ಸಚ್ಚಾಸ್ತ್ರಾಸಕ್ತ ಹೃದಯಂ ಸುಕೃತೀಂದ್ರ ಗುರುಂ ಭಜೆ ||


* ಆಶ್ರಮ ನಾಮ - ಶ್ರೀ 1008 ಶ್ರೀ  ಸುಕೃತೀಂದ್ರ ತೀರ್ಥರು
 name after taking sanyasa  - shri Sukruteendra teertharu 
*ಕಾಲ - 1903-1912
Period : 1903 - 1912
*ಪೂರ್ವಾಶ್ರಮ ನಾಮ  - ವೇಣುಗೊಪಾಲಾಚಾರ್ಯರು
  name before sanyasa Venugopalacharyaru 
*ಆಶ್ರಮ ಗುರುಗಳು - ಶ್ರೀ ಸುಪ್ರಜ್ಞೆಂದ್ರ ತೀರ್ಥರು
 ashrama guru -Shri Suprajnendra teertharu 
*ವಿದ್ಯಾಗುರುಗಳು- ಶ್ರೀ ಹುಲಿ ಹನುಮಂತಾಚಾರ್ಯ  
vidyaaguru- shri Huli Hanumantacharya  

*ವೃಂದಾವನ ಸ್ಥಳ - ನಂಜನಗೂಡು 
Vrindavana Situated at : Nanjangud



ಶ್ರೀ ಸುಕೃತೀಂದ್ರ ತೀರ್ಥರು  ಪೀಠ ವಿರಾಜಮಾನರಾದ ಕಾಲ ಸುಮಾರು 1903 ರಿಂದ 1912 . ಸುಮಾರು 9 ವರ್ಷಗಳ ಕಾಲ ಪೀಠಾಧಿಪತ್ಯ ವಹಿಸಿದ್ದರು . ರಾಯರ ಕೃಪೆಗೆ ಪಾತ್ರರಾಗಿದ್ದವರು . ಇವರ ಪೂರ್ವಾಶ್ರಮದ ಹೆಸರು ವೇಣುಗೊಪಾಲಾಚಾರ್ಯರು . ಇವರ ವಿದ್ಯಾಗುರುಗಳು ಶ್ರೀ ಹುಲಿ ಹನುಮಂತಾಚಾರ್ಯರು . 
ವಿಶೇಷತೆಗಳು - 
* ಶ್ರೀಮನ್ಮಧ್ವಾಚರ್ಯರಿಗೆ ಬಹಳ ಪ್ರೀತಿಪಾತ್ರರು . ಶ್ರೀಮನ್ಮಧ್ವಜಯಂತಿಯ ದಿನವೆ ಇವರ ಪುಣ್ಯ ದಿನ.. ಇದು ಆಚಾರ್ಯರ   
   ಅನುಗ್ರಹ.
* ವಿದ್ವತ್ ಪ್ರೌಢಿಮೆ , ಸದಾಚಾರ ಸಂಪನ್ನತೆ , ಸಕಲ ಶಾಸ್ತ್ರಪಾರಂಗತ 
* ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಸಂತತಿಯಲ್ಲಿ ಜ್ಯೇಷ್ಠರು 
* ಶ್ರೀ ಗುರುರಾಜರ ಉಭಯ ವಂಶಾಬ್ಡಿ ಚಂದ್ರಮರು 
* ಪೂರ್ವಾಶ್ರಮದಿಂದಲೇ ಅಪಾರ ಪಾಂಡಿತ್ಯ , ಪವಾಡ ಪ್ರದರ್ಶನ , ಪಾಠ ಪ್ರವಚನ 
* ಟಿಪ್ಪಣಿಗಳನ್ನೂ ನೋಡದೆಯೇ ಪುಸ್ತಕಾನಪೆಕ್ಷಿತವಾಗಿ ಶಾಸ್ತ್ರ ಪಂಕ್ತಿಗಳು , ಸರ್ವಮೂಲ ಪ್ರಮೆಯಗಳು ಗಂಗಾ ಪ್ರವಾಹದಂತೆ ಹೇಳುತ್ತಿದ್ದರು .
* ಅಲ್ಪ ಜೀವಿತದಲ್ಲಿಯೇ ಅಪಾರ ಸಾಧನೆ , ವಿರಕ್ತಿ ವೈರಾಗ್ಯ ಸಂಪಾದನೆ 
* ಶ್ರೀಮುಷ್ಣಂ ಗೋಪಾಲಚಾರ್ಯ , ಸುಬ್ಬಾಚಾರ್ಯ , ಮಯಾವರ ಕೃಷ್ಣಾಚಾರ್ಯ ಮುಂತಾದ ವಾದಿ  ದಿಗ್ವಿಜಯ 
*ವಿಚಿತ್ರ ಅವಸಾನ . " ಲೌಕಿಕ ಸಂಪರ್ಕ ಸಾಕು " ಹತ್ತಿರವಿದ್ದ ಭಕ್ತರಿಗೆ " ಇಗೋ ನೋಡಿ ಪ್ರಾಣವಾಯು ನಾಭಿಯನ್ನು ಬಿಟ್ಟು ಊರ್ಧ್ವಭಾಗಕ್ಕೆ ಬಂದರು " ಎಂದು ಶ್ವಾಸಗತಿಯನ್ನು ಕ್ರಮವಾಗಿ ಹೇಳಿ ನಾರಾಯಣ ಉಪಾಸ್ಯ ಮೂರ್ತಿ ಮೂಲ ರಾಮಚಂದ್ರ ವೇದವ್ಯಾಸ ರ  ನಾಮ ಸಂಕೀರ್ತನೆ ಮಾಡುತ್ತಾ ಇಹಲೋಕ ತ್ಯಜಿಸಿದರು . 
*ಶ್ರೀ ಸುಶೀಲೆಂದ್ರ ತೀರ್ಥ( ರಿತ್ತಿ ರಾಯರೆಂದೇ ಹೆಸರಾದ ರಾಯರ ಮಠದ ಶ್ರೀ ಧೀರೇಂದ್ರ ತೀರ್ಥರ ಪಕ್ಕದಲ್ಲಿ ಸ್ಥಾನಪಡೆದ ಮಹಾನುಭಾವರು )ರಂತಹ ಪ್ರಕಾಂಡ ಪಂಡಿತರನ್ನು ರಾಯರ ಮಠಕ್ಕೆ ಕೊಟ್ಟು , ಆಶ್ರಮ ಪ್ರದಾನ ಮಾಡಿ ಯತಿಗಳನ್ನಾಗಿಸಿದ್ದು . 
           ENGLISH VERSION -
Shri Sukruteendra is a famous pontiff of shri Raghavendra swami matha . He studies all shastras under Shri Huli Hanumantacharya . His poorvaashrama name is Venugopalacharya . He was a great follower of Shri Rahavendra teertharu . 
SPECIALTY OF SHRI GALU -  
* His aradhana lies on the day of 'MADHWA JAYANTI ' . It shows that how much SHri man Madhwacharya blessed his child i.e Shri Sukruteendra teertharu .
*Venugopalacharya’s majestic personality, piety and austerity
added greater glory to the excellence of his scholarship.

*Venugopalacharya who came in the poorvashrama eldest lineage of Sri Gururaja was the eldest son.The swamiji’s unmatched brilliance arising from performance of regular poojas, imparting of knowledge in his poorvashrama itself grew more effulgent. And he was UBHAYA VAMSHABDHI CHANDRAMA of rayara parampare .
* It was a virtual feast for the scholars to listen the swamiji teach.
* And in  his tour of Tamilnadu, scholars like Srimushnam Gopalakrishnacharya, Subbarayacharya, Krishnacharya of Mayavara were amazed to hear
swamiji’s lecture.

*In his less life span he achieved a lot . 
*He was giving pravachana and teaching Sarvamoola granthas and their prameyas without refering any books or notes . That shows his ability .
*He had miraculous end . He expalined his shishyas how pranavayu is moving out of his body . Beckoning
some disciples nearby he said, “Look here. Pranadeva has left the navel and has moved upwards”. Thus narrating the different stages of the breath as it moved upwards and chanting the name of Lord Narayana, the swamiji departed from the world. This amply demonstrates the transcendency of his ascetic powers and
profoundly premonitive vision.


Monday 22 October 2012

ಭಗವಾನ್ ವೇದವ್ಯಾಸರು ಮಾಡಿರುವ ಅಷ್ಟಾದಶ ಮಹಾ ಪುರಾನಗಳು ಎಲ್ಲರಿಗು ಗೊತ್ತಿರುವದೇ . ಅವುಗಳಲ್ಲಿ ಅನೇಕ ದೇವತೆಗಳ ಮಹಿಮೆಯನ್ನು ವರ್ಣಿಸುವ ಘಟನೆಗಳ ಚಿತ್ರಣ ಬರುವದು . ಅವುಗಳಲ್ಲಿ ಅಂದರೆ ಪುರಾಣಗಳಲ್ಲಿ 3 ವಿಧಗಳು 1) ಸಾತ್ವಿಕ 2) ರಾಜಸ 3) ತಾಮಸ ಎಂದು . ಇವುಗಳನ್ನು ವೇದಗಳನ್ನು ಅಧ್ಯಯನ ಮಾಡಿ ವೇದಗಳನ್ನೇ 4 ವಿಧಗಳಾಗಿ ವಿಂಗಡಣೆ ಮಾಡಿದ ಸಾಕ್ಷಾತ್ ವಿಷ್ಣುರೂಪಿ ವೇದವ್ಯಾಸರು ವಿಂಗಡಿಸಿದ್ದು . ಅವುಗಳಲ್ಲಿರುವ ಎಲ್ಲ ವಿಚಾರಗಳು ವೇದದಲ್ಲಿ ಹೇಳಿದ್ದು ಎಂದು ವೇದವ್ಯಾಸರು ಅನೇಕ ಸಾತ್ವಿಕ ಪುರಾಣಗಳಲ್ಲಿ ಪ್ರಮಾಣ ನೀಡಿದ್ದಾರೆ .

1) " ಇತಿಹಾಸ ಪುರಾಣಾಭ್ಯಾಂ ವೇದಸಮುಪಬೃಂಹವೇತ್ || " ( ಇತಿ ವಾಯುಪುರಾಣೆ ಉಕ್ತಂ )
2) " ವೇದಾಃ ಪ್ರತಿಷ್ಟಿತಾಃ ಸರ್ವೇ ಪುರಾಣೇ ನಾತ್ರ ಸಂಶಯಃ || " ( ಇತಿ ಸ್ಕಂದ ಪುರಾಣೇ ಉಕ್ತಂ )
3) " ಧನ್ಯಂ ಯಶಸ್ಯಮಾಯುಶ್ಯಂ ಪುಣ್ಯಂ ವೇದೈಶ್ಚ ಸಂಹಿತಂ || " ( ಇತಿ ಬ್ರಹ್ಮಾಂಡ ಪುರಾಣೇ )
4) " ಆತ್ಮಾ ಪುರಾಣಂ ವೇದಾನಾಂ || " ( ಇತಿ ನಾರದೀಯ ಪುರಾನೇ ಉಕ್ತಂ )
5) "ಪುರಾಣಂ ಪಂಚಮೋ ವೇದಃ || " ( ಇತಿ ಪದ್ಮ ಪುರಾಣೇ ) 

ಹೀಗೆ " ನಿಸ್ತಾರಾಯ ತು ಲೋಕಾನಂ ಸ್ವಯಂ ನಾರಾಯಣಃ ಪ್ರಭು: | ವ್ಯಾಸರೂಪೆಣ ಕೃತವಾನ್ ಪುರಾಣಾನಿ ಮಹೀತಲೇ " ಎಂದು ಹೇಳಿಕೊಂಡಿರುವ ವ್ಯಾಸರೇ ಹೇಳಿದ್ದಾರೆ . ಆದ್ದರಿಂದ ಸಾತ್ವಿಕ ಪುರಾಣಗಳು ಸಾರುವ ವಿಷ್ಣುಸರ್ವೊತ್ತಮತ್ವ ಸಾಧಿಸಿತು . ಶ್ರೀ ಮನ್ಮಧ್ವಾಚಾರ್ಯರು ಹೇಳಿದ್ದು ಇದನ್ನೇ . ಹರಿಃ  ಸರ್ವೋತ್ತಮಃ  ವಾಯು ಜೀವೊತ್ತಮಃ |
ಆದಾರಿಂದ ಸಾಕ್ಷಾತ್ ಪರಮಾತ್ಮನ ಅವತಾರ ವ್ಯಾಸರ ಉಕ್ತಿಯಂತೆ ಪುರಾಣಗಳನ್ನು ವೇದಗಳ ಸಾರ ಅಥವಾ ವೇದಗಳ ವರ್ಣನೆ ಎಂದು ತಿಳಿಯಬಹುದು .

ಪುರಾಣಪ್ರಪಂಚ - ಪುರಾಣಗಳಲ್ಲಿ ವಿಂಗಡಣೆ (ಪಾದ್ಮಪುರಾಣವಚನಾನಿ)


ಶ್ರೀ ಭಾಗವನ್ ವೆದವ್ಯಾಸರು ಮಹಾಪುರಾಣಗಳನ್ನು ಸಾತ್ವಿಕ-ರಾಜಸ-ತಾಮಸ ಎಂದು ವಿಂಗಡಣೆ ಮಾಡಿದ್ದಾರೋ ಅದೇ ರೀತಿ ಶಾಸ್ತ್ರಗಳಲ್ಲಿಯೂ ಮೂರು ವಿಧಗಳು ಇವೆ ಎಂದು "ಸಾತ್ವಿಕ ಪುರಾಣವಾದ" ಪಾದ್ಮ ಪುರಾಣದಲ್ಲಿ ಹೇಳಿದೆ . 

*ಸಾತ್ವಿಕ ಶಾಸ್ತ್ರ -
                     ಶಾಸ್ತ್ರಾಣ್ಯಪಿಚಸರ್ವಾಣಿ ಸಾತ್ವಿಕಾನಿ ಮತಾನಿ ವೈ |
                     ಯಾನಿ ಸಸತ್ಯವರಂ ವಿಷ್ಣುಂ ವದಂತಿ ಪರಮೆಶ್ವರಂ 
                      ತಾನಿ ಶಾಸ್ತ್ರಾಣಿ ಸರ್ವಾಣಿ ಸಾತ್ವಿಕಾನಿ ಮತಾನಿ ವೈ 
*ರಾಜಸ ಶಾಸ್ತ್ರ - 
                       ಪ್ರಜಾಪತಿಂ ಕ್ರುಶಾನುಂ ಚ ತಥಾ ದೇವಿ ಸರಸ್ವತಿಂ |
                       ಪರತ್ವೇನ ವದಚ್ಚಾಸ್ತ್ರಂ ರಾಜಸಂ ಪರಿಚಕ್ಷತೆ || 
 *ತಾಮಸ ಶಾಸ್ತ್ರ- 
                     ಯಚ್ಚಾಸ್ರಂ ಲಿಂಗಪಾರಮ್ಯಂ ವಾಮದೆವಮುಮಾಪತಿಂ |
                     ತಮಃ ಪ್ರವರ್ತಕಂ ವಕ್ತಿ ತತ್ತಾಮಸಮುದಾಹೃತಂ || 
                              - ಇತಿ ಪಾದ್ಮಪುರಾಣವಚನಾನಿ 
                      
ಯಾವ ಶಾಸ್ತ್ರಗಳು ಶ್ರೀಮನ್ನಾರಾಯಣನನ್ನು ಸರ್ವೋತ್ತಮ ಎಂದು ಸಾರುತ್ತವೆಯೋ ಅವು ಸಾತ್ವಿಕ ಶಾಸ್ತ್ರಗಳು .  
ಮತ್ತು ಯಾವು ಪ್ರಜಾಪತಿಯನ್ನು , ಅಗ್ನಿಯನ್ನು , ಸರಸ್ವತಿದೇವಿಯನ್ನು , ಸರ್ವೋತ್ತಮರೆಂದು ಸಾರುತ್ತವೆಯೋ ಅವು ರಾಜಸ ಶಾಸ್ತ್ರಗಳು ಮತ್ತು ಯಾವ ಶಾಸ್ತ್ರವು ಲಿಂಗಕ್ಕೆ ( ಶಿವನಿಗೆ) ಸರ್ವೋತ್ತಮತ್ವವನ್ನು ತಿಳಿಸುತ್ತದೆಯೋ ಅದು ತಾಮಸ ಶಾಸ್ತ್ರವೆಂದು ಪದ್ಮ ಪುರಾಣದಲ್ಲಿ ಹೇಳಿದೆ .


                         

Saturday 13 October 2012

ಹೊಸ ಲೇಖನಗಳು .
1) ಶ್ರೀಮಜ್ಜಯತೀರ್ಥರು ( ಮಹಾನ್ ಮಾಧ್ವಯತಿಗಳು ಅಂಕಣ)
2) ಶ್ರೀ ಜಿತಾಮಿತ್ರರು ಹಾಗು ಶ್ರೀ ಸುಶಮೀಂದ್ರರು ( special articles by  SJ )
3)  ಗುರುಗಳ ಮಂತ್ರಾಕ್ಷತೆಯ ಮಹಿಮೆ

               ಗುರುಗಳ  ಮಂತ್ರಾಕ್ಷತೆ ಮಹಿಮೆ .- ವಿದ್ವಾನ್  ರಾಜ ಎಸ್ ಪವಮಾನಾಚಾರ್ಯರು , (  ರಾಯರ ಮಠದ ಶ್ರೀ ಸುಜಯೀಂದ್ರ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಪ್ರಪೌತ್ರರು) 

* "ಹರಿದ್ರಾಚೂರ್ಣಸಂಯುಕ್ತಂ ಅಕ್ಷತಂ" ಎಂಬುವಲ್ಲಿ . ಹರಿದ್ರಾ ಚ ಚೂರ್ಣo ಚ = ಹರಿದ್ರಾ ಚೂರ್ಣೆ , ಹರಿದ್ರಾ ಚೂರ್ಣಾಭ್ಯಾಂ ಸಂಯುಕ್ತಂ = ಹರಿದ್ರಾಚೂರ್ಣಸಂಯುಕ್ತಂ ಎಂಬ ವ್ಯುತ್ಪತ್ತಿಯನ್ನಾಶ್ರಯಿಸಿ , ಹರಿದ್ರಾ ಎಂದರೆ ಅರಿಶಿನ , ಚೂರ್ಣವೆಂದರೆ ಸುಣ್ಣ . ಇವುಗಳಿಂದ ಕೂಡಿರುವ ಅಂದರೆ ಅರಿಶಿನ ಮತ್ತು ಸುಣ್ಣ ಇವೆರಡನ್ನೂ ಬಳಸಿ ಕಳಿಸಿರುವ ಅಕ್ಷತೆಯೇ " ಮಂತ್ರಾಕ್ಷತೆ" . ಈ ತರಹದ ಮಂತ್ರಾಕ್ಷತೆಯನ್ನು ಶ್ರೀಮಾನ್ ಮಧ್ವಾಚಾರ್ಯ ಸಂಸ್ಥಾನ  ಶ್ರೀ ರಾಯರ ಮಠದಲ್ಲಿ , ಪೇಜಾವರ ಮಠದಲ್ಲಿ ಇನ್ನು ಕೆಲವು ಮಾಧ್ವ ಮಠಗಳಲ್ಲಿ ಬಳಸಲಾಗುತ್ತದೆ . 
* " ವೃಂದಾರಕಮಣಿಯೋಳೀಪ್ಸಿತವ ನೀವುದಿ | ನ್ನೆಂತು ಬಣ್ಣಿಸಲಿ ಮಂತ್ರಾಕ್ಷತೆಯ ಮಹಿಮೆಯ ನಾ ? " ಎಂಬ ಮಾತಿನಿಂದ ಶ್ರೀ ರಾಯರ ಮಂತ್ರಾಕ್ಷತೆಯು ನಾವು ಬಯಸಿದ ವಸ್ತುಗಳನ್ನು ಚಿಂತಮಣಿಯಂತೆ ಕೊಡುತ್ತದೆ ಎಂದು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮಂತ್ರಾಕ್ಷತೆಯನ್ನು ಮನೋಹರ ವಿಠಲದಾಸರು ಕೊಂಡಾಡಿದ್ದಾರೆ . 
* ಅಭಿನವ ಜನಾರ್ದನ ವಿಠಲರು ಶ್ರೀ ರಾಘವೇಂದ್ರ ಸ್ವಾಮಿಗಳವರ ಮೇಲೆ ರಚಿಸಿರುವ "ನೋಡಿದೆನು ಗುರು ರಾಘವೇಂದ್ರರ " ಎಂಬ ಕೃತಿಯಲ್ಲಿ , ಸುಕ್ಷೇತ್ರ ಮಂತ್ರಾಲಯಕ್ಕೆ ಹೋಗಿದ್ದ ಸುಸಂದರ್ಭದಲ್ಲಿ ಭಕ್ತಸಾಗರ ಶ್ರೀಶ್ರೀ ವಾದೀಂದ್ರತೀರ್ಥ ಗುರುಗಳಿಂದ  ಮಂತ್ರಾಕ್ಷತೆಯನ್ನು ತೆಗೆದುಕೊಳ್ಳುತ್ತಿದ್ದ ದೃಶ್ಯವನ್ನು ಕಣ್ಣಾರೆ ಕಂಡು , ಅದನ್ನು " ಮಂತ್ರ ಅಕ್ಷತಿ ಕೊಳುತಲಿ | ಸಂತ ಗುರು ವಾದೀಂದ್ರ ರಾಯರ " ಎಂಬ ಮಾತಿನಿಂದ ಶ್ರೀ ಮದ್ವಾದೀಂದ್ರರ ಮಂತ್ರಾಕ್ಷತೆ ಮಹಿಮೆಯನ್ನು ವರ್ಣಿಸುತ್ತಾರೆ .ಇದು ಒಟ್ಟಾರೆ ಗುರುಗಳು ನೀಡಿದ ಮಂತ್ರಾಕ್ಷತೆಯ ಮಹಿಮೆಯೇ ಆಯಿತು . 
*ಶ್ರೀಪತಿ ವಿಠಲ ದಾಸರು , ತಮ್ಮ ' ವೃಂದಾವನದಿ ವಿರಾಜಿಪ ಯತಿವರ ನ್ಯಾರೆ | ಪೇಳಮ್ಮಯ್ಯ ' ಎಂಬ ಕೃತಿಯಲ್ಲಿ ' ತಾ ಸುಕರದಿ ಮಂತ್ರಾಕ್ಷತೆ ಕೊಡುತಿಹನ್ಯಾರೆ " ಎಂಬ  ಮಾತಿನಿಂದ ಶ್ರೀ ರಾಯರ ಮಂತ್ರಾಕ್ಷತೆಯ ಮಹಿಮೆ ವರ್ಣಿಸಿದ್ದಾರೆ . ಇದು ಕೂಡ ಗುರುಗಳು ನೀಡುವ ಮಂತ್ರಾಕ್ಷತೆಯಾ ಮಹಿಮೆಯೇ ಸರೀ .
*ಭೀಮೇಶ ಕೃಷ್ಣರು ರಾಯರ ಮೇಲೆ ಬರೆದ ಕೃತಿಯಲ್ಲಿ " ಮಂತ್ರಾಕ್ಷತೆ ಫಲ ನೀಡಿ |ಸಂತಾನ ಸಂಪತ್ತು ಕೊಡುವರ " ಎಂಬ ಮಾತಿನಿಂದ ಗುರುಗಳ ಮಂತ್ರಾಕ್ಷತೆಯಿಂದ ಏನೇನು ಲಭ್ಯ ಎಂಬುದನ್ನು ತಿಳಿಸಿದ್ದಾರೆ . 
*ಇಂದಿರೇಶರು ರಾಯರ ಬಗ್ಗೆ ರಚಿಸಿದ ' ಮಂಗಳಂ ಜಯ ಮಂಗಳಂ ' ಎಂಬ ಕ್ರುತಿಯಲ್ಲಿ ' ತಂದ ಮಂತ್ರಾಕ್ಷತೆ ಕೊಟ್ಟವಗೆ ' ಎಂಬ ಮಾತಿನಿಂದ ಗುರುಗಳ ಮಂತ್ರಾಕ್ಷತೆ ಮಂಗಳಕರ ಎಂಬುದನ್ನು ಸಾರಿದ್ದಾರೆ .
*ಕನಕಾದ್ರಿ ವಿಠಲ ವಿರಚಿತ ರಾಯರ ಮೇಲಿನ ಗ್ರಂಥದಲ್ಲಿ " ಮಂತ್ರಾಕ್ಷತಿ ಫಲ ಕೈವಲ್ಯವು ಇವರ ಅಂತರ್ಯಾಮಿ ಶ್ರೀ ರಘುಪತಿಕನಕಾದ್ರಿವಿಠಲ ನಿರಂತರ ವಿವರಿಸಿ ಕೈಗೊಂಡು ಇವರಿಂದಲಿ ಕೊಡುವ" ಎಂಬ ಮಾತುಗಳಿಂದ ಗುರುಗಳ ಮಂತ್ರಾಕ್ಷತೆಯಿಂದ ಮೊಕ್ಷಾದಿ ಪುರುಷಾರ್ಥಗಳು ದೊರೆಯುವವು ಎಂದು ಹೇಳಿದ್ದಾರೆ .  

Friday 12 October 2012

ಹೊಸ ಲೇಖನಗಳು .
1) ಶ್ರೀಮಜ್ಜಯತೀರ್ಥರು ( ಮಹಾನ್ ಮಾಧ್ವಯತಿಗಳು ಅಂಕಣ)
2) ಶ್ರೀ ಜಿತಾಮಿತ್ರರು ಹಾಗು ಶ್ರೀ ಸುಶಮೀಂದ್ರರು ( special articles by  SJ )
3)  ಗುರುಗಳ ಮಂತ್ರಾಕ್ಷತೆಯ ಮಹಿಮೆ

ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ವತೋ 
ಭೇದೋ ಜೀವಗಣಾ ಹರೇರನುಚರಾ ನೀಚೋಚ್ಚಭಾವಂ ಗತಾಃ |
ಮುಕ್ತಿರ್ನೈಜ ಸುಖಾನುಭೂತಿರಮಲ ಭಕ್ತಿಶ್ಚ ತತ್ಸಾಧನಂ 
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ ||

ಈ ಮೇಲಿನ ಶ್ಲೋಕ ಶ್ರೀ ಮದ್ವ್ಯಾಸರಾಜ ತೀರ್ಥ ಗುರುಸಾರ್ವಭೌಮರಿಂದ ರಚಿತವಾದುದು . ಕೇವಲ 4 ಸಾಲುಗಳಲ್ಲಿ ಶ್ರೀ ವ್ಯಾಸತೀರ್ಥರು ಮಧ್ವ ಮತದ  ಸಾರವನ್ನು ನಮ್ಮಂತಹ ಪಾಮರರಿಗೆ ತಿಳಿಸಿಕೊಟ್ಟಿದ್ದಾರೆ .
ಅರ್ಥ - ಶ್ರೀಮನ್ಮಧ್ವಾಚಾರ್ಯರಿಂದ ರಚಿತವಾದ ಮತದಲ್ಲಿ ಸಕಲ ಶ್ರುತಿ-ಸ್ಮೃತಿ-ಪುರಾಣ- ವೇದೋಕ್ತಿಗಳನ್ನು ಆಧರಿಸಿ ಶ್ರೀ ಮನ್ನಾರಾಯಣನೇ ( ಶ್ರೀ ಮಹಾ ವಿಷ್ಣುವೇ) ಸರ್ವೋತ್ತಮನು . ಶ್ರೀ ವಾಯುರೂಪಿ ಮಧ್ವರೇ  ಜೀವೊತ್ತಮರು . ಈ ಜಗತ್ತು ಸತ್ಯವಾದುದು ಹೊರತು ಮಿಥ್ಯವಲ್ಲ . ಪಂಚ ಭೇದವು ಮಾನ್ಯ . ಎಲ್ಲ ಸಕಲ ಜೀವರಾಶಿಗಳು ಆ ಜಗನ್ನಿಯಾಮಕನಾದ ಶ್ರೀಹರಿಯ ಅನುಚರರು . ಜೀವರಲ್ಲಿ ತಾರತಮ್ಯ ಉಂಟು .  ಮುಕ್ತಿಯ ಸುಖಾನುಭೂತಿ ಮಧ್ವಮತದಲ್ಲಿ ಶ್ರೀ ಹರಿ ವಾಯುಗುರುಗಳ ಅನುಗ್ರಹದಿಂದಲೇ ದೊರೆಯುವದು . ಆ ಪರಮಾತ್ಮನ ಮೇಲಿನ ಅಮಲವಾದ ಭಕ್ತಿಯೇ ಮುಕಿಗೆ ಸಾಧನ . ಶ್ರೀ ಮಧ್ವರು ಬೋಧಿಸಿದ ಮತದಲ್ಲಿ ಪ್ರತ್ಯಕ್ಷ , ಅನುಮಾನ , ಆಗಮ ಎಂಬ ಮೂರನ್ನು ಮಾತ್ರ ಪ್ರಮಾಣ ಎಂದು ಹೇಳಲಾಗಿದೆ . ಶ್ರೀಹರಿಯು ಸರ್ವ ವೇದ ಪ್ರತಿಪಾದ್ಯನು .

ವಿಶ್ವೇಶತೀರ್ಥರು ನಿಜ ಧರ್ಮ ರಕ್ಷಕರು  
ಮುನ್ನುಡಿ -
ಉಡುಪಿ  ಪೇಜಾವರ ಮಠ  ಶ್ರೀ ವಿಶ್ವೇಶ ತೀರ್ಥರು ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವದು ಹಿಂದೂ ಸಮಾಜೋದ್ಧಾರ. ಶ್ರೀಗಳು ಹಿಂದೂ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ , ನೀಡುತ್ತಲಿದ್ದಾರೆ . ಕೇವಲ 8ನೆಯ ವಯಸ್ಸಿಗೆ ಯತ್ಯಾಶ್ರಮ ಸ್ವೀಕರಿಸಿ ತಮ್ಮ ಜೀವನವನ್ನೇ ಕೇವಲ ಅಧ್ಯಯನ , ಧರ್ಮ ರಕ್ಷಣಾ , ಸಾಮಾಜಿಕ ಜಾಗ್ರತೆ , ದಲಿತರ ಉದ್ಧಾರ ಮುಂತಾದ ಸತ್ಕಾರ್ಯಗಳಿಗೊಸ್ಕರವೇ ಮುಡಿಪಾಗಿ ಇಟ್ಟಿದ್ದಾರೆ. ಪರಪೂಜ್ಯರ ಹೆಸರು ಎಲ್ಲ ಸಜ್ಜನರಿಗೂ ಚಿರ ಪರಿಚಿತ.ಇಂದಿನ ಎಡರು ತೊಡರು  ಸಮಾಜಕ್ಕೆ, ಬ್ರಷ್ಠ ರಾಜಕೀಯ ಸುಧಾರಣೆಗೆ  ಶ್ರೀಗಳ ಸಂದೇಶಗಳು ಅನಂತ. ತರುಣ ವಯಸ್ಸಿನಿಂದಲೂ  ರಾಜಕೀಯ-ಸಾಮಾಜಿಕ ಎಡರು ತೊಡರುಗಳಾದರೆ  ಅದನ್ನು ಸಹಿಸುವ ಪ್ರವೃತ್ತಿ ಶ್ರೀಗಳದ್ದಲ್ಲ.ತಾವೇ ಮುಂದೆ ನಿಂದು ಹಂಗು ತೊರೆದು ಸಮಾಜಕ್ಕೆ ತೊಂದರೆ ಯಾಗ ಬಾರದೆಂದು ಕಳಕಳಿಯಿಂದ ಸಮಸ್ಯೆ.ಪರಿಹರಿಸುವ ಸಮಾಜ ಸುಧಾರಕ ಮಹಾಸ್ವಾಮಿಗಳು.ದೀನ-ದಲಿತರ ಬಗ್ಗೆ ಶ್ರೀಗಲಿಗಿರುವ ಕರುಣೆ ಅಪಾರ.
ಜಾತ್ಯತೀತ ಸಂಘಟಿತ ಭಾರತ ಶ್ರೀಗಳ ಕನಸು.ಜಗದ್ಗುರು ಶ್ರೀಮಾನ್ ಮಧ್ವಾಚಾರ್ಯರ ದ್ವೈತ ಸಿದ್ಧಾಂತದ ಪ್ರಚಾರದಲ್ಲಿಯು ಶ್ರೀಗಳುಲೋಪವೆಸಗಿಲ್ಲ. ಸದಾ ಜಿಜ್ಞಾಸೆಯಲ್ಲಿ ತೊಡಗುವ ಶ್ರೀಗಳು ಮಧ್ವರ ಸಿದ್ಧಾಂತದ ಸುವಾಸನೆಯನ್ನು ಕಾಶ್ಮೀರ ದಿಂದ ಕನ್ಯಾಕುಮಾರಿವರೆಗೂ 
ಸೂಸಿದ್ದಾರೆ  .ಜಗದ್ಗುರು ಆಚಾರ್ಯ ಪ್ರತಿಷ್ಠಿತ ಶ್ರೀ ಕೃಷ್ಣ ಆರಾಧಕ ಶ್ರೀಗಳ ಚರಣಾರವಿಂದಗಳಲ್ಲಿ  ಗಳಲ್ಲಿ ಈ ಚಿಕ್ಕ ಕಾಣಿಕೆ ಸಮರ್ಪಿಸುತ್ತಿದ್ದೇನೆ.
                                                                                                                            
         
                                                 ||  ಶ್ರೀ ಗುರುಭ್ಯೋ ನಮಃ ||
ವಿಶ್ವೇಶ ತೀರ್ಥರ ಪೂರ್ವಾಶ್ರಮ - 
                                ಉಡುಪಿಯ ಸಮೀಪದಲ್ಲಿರುವ ರಾಮಕುಂಜದ ಶ್ರೀ ನಾರಾಯಣಾಚಾರ್ಯ  ಮತ್ತು ಕಮಲಮ್ಮ  ದಂಪತಿಗಳಿಗೆ ದೊರೆತ ಪುತ್ರ ರತ್ನಕ್ಕೆ ವೆಂಕಟರಮಣ ಎಂದು ಹೆಸರಿಟ್ಟರು. ವೆಂಕಟರಮಣ ಬಾಲ್ಯದಲ್ಲಿ ಅಸಾಮಾನ್ಯ ಗುಣಗಳನ್ನು ಹೊಂದಿದ ಬಾಲಕ . ಬಾಲಕ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಸಾತ್ವಿಕ ಗುಣಗಳನ್ನು ಹೊಂದಿದ್ದ.
ಇದು ಎಲ್ಲರನ್ನು ಅಚ್ಚರಿಗೋಳಿಸಿತ್ತು.ಈತನ ಈ ಅಸಾಮಾನ್ಯ ವ್ಯಕ್ತಿತ್ವವನ್ನು ಗುರುತಿಸಿದ ಅಂದಿನ ಶ್ರೀ ಪೇಜಾವರ ಮಠಾಧೀಶಶ್ರೀ 1008ವಿಶ್ವಮಾನ್ಯ ತೀರ್ಥರು ಗುರುತಿಸಿದರು.ರಾಮಕುಂಜ ವೆಂಕಟರಮಣನ ಜೀವನದ ಅತ್ಯಂತ ಶುಭ ಸಂದರ್ಭ ಸಮೀಪಿಸಿತು.
ವೆಂಕಟರಮಣನ 8ನೆ ವಯಸ್ಸಿನಲ್ಲಿ ಡಿಸೆಂಬರ್ 3 1938ರಲ್ಲಿ ಶ್ರೀ ವಿಶ್ವಮಾನ್ಯ ತೀರ್ಥರು ಆತನ ಅಸಾಧಾರಣ ಪಾಂಡಿತ್ಯ,ವ್ಯಕ್ತಿತ್ವವನ್ನು ಹೊರಹಾಕಲು ಅನುವು ಮಾಡಿಕೊಟ್ಟು ಚಕ್ರತೀರ್ಥದಲ್ಲಿ  ಆತನನ್ನು ಸಾಂಸಾರಿಕ ಜಂಜಾಟದಿಂದ  ಮೊದಲೇ ದೂರ ಮಾಡಿಬಿಟ್ಟರು. ರಾಮಕುಂಜ ವೆಂಕಟರಮಣ ಶ್ರೀ ವಿಶ್ವೇಶ ತೀರ್ಥರಾದ ಸುದಿನ ಅದು. ಇಂತಹ ಯತಿ ವರ್ಯರನ್ನು ಸಮಾಜಕ್ಕೆ ಕೊಟ್ಟ ಶ್ರೀ ವಿಶ್ವಮಾನ್ಯ ತೀರ್ಥರು ನಿಜಕ್ಕೂ ವಿಶ್ವ ಮಾನ್ಯರು. 
                   

ಶ್ರೀಗಳವರ  ಅಧ್ಯಯನ - 
ಶ್ರೀಗಳವರ ಅಧ್ಯನ ಮೊದಲು ಅವರ ಕಾರ್ಯ ಕ್ಷೇತ್ರ ಉಡುಪಿಯಲ್ಲೇ ಆಯಿತು. ಆಗಿನ ಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರು , ನೂತನ ಬಾಲ ಯತಿ ಶ್ರೀ ವಿಶ್ವೇಶ ತೀರ್ಥರಿಗೆ  ಶಾಸ್ತ್ರ-ಯತಿ ಧರ್ಮ ಇತ್ಯಾದಿಗಳನ್ನು 8 ವರ್ಷಗಳ ಕಾಲ ಭೋಧಿಸಿದರು. ಶ್ರೀ ವಿಶ್ವೇಶ ತೀರ್ಥರನ್ನು ಶ್ರೀ ವಿದ್ಯಾ ಮಾನ್ಯರಿಂದ ಅನೇಕ 'ವಿದ್ಯೆ'ಗಳನ್ನು ಕಲಿತು ಅತೀ ಚಿಕ್ಕ ವಯಸ್ಸಿನಲ್ಲೇ ನ್ಯಾಯ-ವೇದಾಂತ-ತರ್ಕ -ಮೀಮಾಂಸಾದಿ ಶಾಸ್ತ್ರಗಳಲ್ಲಿ ಪಾರಂಗತರಾಗಿ ಎಲ್ಲರಿಂದಲೂ' ಮಾನ್ಯ'ರಾದರು. 

                                          Sanyasa from Sri Vidyamanya Swamiji

                      ಶ್ರೀ ವಿದ್ಯಾಮಾನ್ಯ ತೀರ್ಥರಿಂದ ಅನುಗ್ರಹ ಪಡೆಯುತ್ತಿರುವ  ಬಾಲಕ ರಾಮಕುಂಜ ವೆಂಕಟರಮಣ \ 
    
         ಇಂದಿನ ಕಾಲದಲ್ಲಿ ಬ್ರಾಹ್ಮಣರು ಸ್ವಲ್ಪ ಎಡವಿದರು ಅವಮಾನ - ಅಪಮಾನಕ್ಕೆ ತುತ್ತಾಗುತ್ತಾರೆ . ಇಂತಹ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀಗಳವರು ಬ್ರಾಹ್ಮಣರ ಅದರಲ್ಲೂ ವಿಶೇಷವಾಗಿ ಮಾಧ್ವರ ಬಗ್ಗೆ ಜನ ಮಾನಸದಲ್ಲಿ ವಿಶಿಷ್ಟ ಸ್ಥಾನ ಮೂಡುವಂತೆ ಮಾಡಿದ್ದಾರೆ.  ಇಂದು ಬ್ರಾಹ್ಮಣರಲ್ಲಿಯ ಯತಿಗಳು ಎಂದರೆ ಜಗದಲ್ಲಿನ ಜನರು ಶ್ರೀ ವಿಶ್ವೇಶ ತೀರ್ಥರ ಎದೆಗೆ ಬೊಟ್ಟು ಮಾಡಿಸುವಂತಾಗಿದೆ . ಶ್ರೀ ಗಳು ತಮ್ಮ ತಾರುಣ್ಯದ ಕಾಲದಿಂದಲೇ  ನ್ಯಾಯಕ್ಕಾಗಿ ಹೋರಾಟ , ಸಮಾಜದ ಅಸಮಾನತೆಯ ವಿರುದ್ಧ ಹೋರಾಟ , ಮಾಧ್ವರ ಕಲ್ಯಾಣ , ಸಮಸ್ತ ಬ್ರಾಹ್ಮಣರ ಹಿತಾಸಕ್ತಿ , ದಲಿತರ ಉದ್ಧಾರ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಮಸ್ತವಾಗಿ ತೊಡಗಿಸಿಕೊಂಡಿದ್ದರೂ ಜಗದ್ಗುರು ಆಚಾರ್ಯ ಮಧ್ವರ ಶಾಸ್ತ್ರ ಅಧ್ಯಯನ ಹಾಗು ಸಂಶೋಧನೆ , ಪಂಡಿತರುಗಳ  ನಿರ್ಮಾಣ ಮುಂತಾದ ಕಾರ್ಯಗಳಲ್ಲಿ ಯಾವುದೇ ಲೋಪವೆಸಗಿಲ್ಲ . ಶ್ರೀಗಳ ವ್ಯಕ್ತಿತ್ವ ಅತ್ಯಂತ ಉದಾರ . ಮಗುವಿನಂತೆ ಶುದ್ಧ ಮನಸ್ಸು . ಶ್ರೀ ಗಳನ್ನೂ ಎಷ್ಟು ಕೊಂಡಾಡಿದರು ಸಾಲದು . ಶ್ರೀಗಳಿಗೆ  ಮಾಧ್ವರು ಮಾತ್ರ ಕೃತಜ್ಞರಾಗಬೇಕಿಲ್ಲ ಸಮಸ್ತ ಜನರು ಇವರ ಸೇವೆಗೆ ಅರ್ಹರು . ಶ್ರೀಗಳು 20 ನೆ ಶತಮಾನದ ಶಕಪುರುಷ .
             ಆದರು ಇತ್ತೀಚಿಗೆ ಶ್ರೀಗಳ ವಿರುದ್ಧ ಕೆಲವು ಅವಿವೇಕಿ-ಮೂಢ ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿರುವದು ಬಹಳ ಖೇದಕರ ಸಂಗತಿ . ಇದರಲ್ಲಿ ಪ್ರಮುಖ " ಪ್ರತಾಪ ಸಿಂಹ ಅವರ ಲೇಖನ " ಈ ಬಗ್ಗೆ ಕನ್ನಡ ಪ್ರಭಾ ದಲ್ಲಿ ನಮ್ಮ ಪ್ರತ್ಯುತ್ತರ ನೀಡಿದ ಲೇಖನ ನೀಡಿದ್ದಾರೂ ಕಪಟಿ ಪ್ರತ್ರಿಕೆಯ ಸಿಬ್ಬಂದಿ ಅದನ್ನು ಮುದ್ರಿಸಲಿಲ್ಲ . ಅದು ಹಾಗೆ ಇರಲಿ . ಶ್ರೀಗಳು ದಲಿತರ ಬಗೆ ಅದೆಷ್ಟೋ ಹೋರಾಟ ಮಾಡಿದ್ದಾರೆ . ಆದರೆ ಅದೆಷ್ಟೋ ದಲಿತರು ಶ್ರೀಗಳ ವಿರುದ್ಧವೇ " ಸಂವಿಧಾನ ವಿರೋಧಿ ಪೇಜಾವರ ಶ್ರೀ " ಎಂದು ಹೆಳಿಕೆಗಳನ್ನಿತ್ತು ತಮ್ಮ ಉದ್ಧಾರಕ್ಕಾಗಿ ಬಂದ ಮಹಾನುಭಾವರ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ . ಎಲ್ಲ ದಲಿತರಿಗೂ ಹೇಳುವದು ಏನೆಂದರೆ " ಪೇಜಾವರ ಸ್ವಾಮಿಗಳಿಗೆ ಯಾರಿಂದಲೂ ಶಭಾಶ್ ಎನಿಸಿಕೊಳ್ಳಬೇಕಿಲ್ಲ . ಯಾರಿಂದಲೂ ಪ್ರಶಂಸೆ ಅಗತ್ಯವಿಲ್ಲ . ಅವರು ಕೇವಲ ಒಬ್ಬ ಹರಕು ಶಾತಿಯ ಸನ್ಯಾಸಿ . ಮಧ್ವರ ಅನುಯಾಯಿ . ಅವರ ಮನಸ್ಸು ಶುದ್ಧ . ಅವರು ನಿಮ್ಮ ರಕ್ಷಣೆಗಾಗಿ ಬಂದದ್ದು ವಾಜಪೇಯಿ-ಅದ್ವಾನಿ-ಇಂದಿರಾ-ಸೋನಿಯಾ ಇಂತವರ ಮನ ವೋಲೈಸಲು ಅಲ್ಲ . ಹಣಕ್ಕೆ ಆಸೆ ಪಡುವ ಅಗತ್ಯವಿಲ್ಲ . ಮಾಧ್ವ ಶಿಷ್ಯರ ಪ್ರೀತಿಯ ಆರೈಕೆಯೇ ಶ್ರೀಗಳಿಗೆ ಕಟಾಕ್ಷ . ನಮಗೆ ಅವರ ಅನುಗ್ರಹವೇ ಕಟಾಕ್ಷ . ಶ್ರೀಗಳು ನಿಮ್ಮ ಪರವಾಗಿ ಇದ್ದಾರೆ ಎಂದರೆ ಅವರ ಬೆಂಬಲ ಪಡೆದು ಒಳ್ಳೆಯ ಕಾರ್ಯಗಳ ಸಫಲತೆ ಪಡೆಯಬೇಕು ಎಂಬುದೇ ನಮ್ಮೆಲ್ಲರ ಆಶಯ . ಮತ್ತು ಶ್ರೀಗಳ ವಿರುದ್ಧ ಅನವಶ್ಯಕವಾಗಿ ಮಾತನಾಡುವವರ ಸಾಲಿನಲ್ಲಿ ಅನೇಕ ಬ್ರಾಹ್ಮಣರು ಇರುವುದು ಅತ್ಯಂತ ಖೇದ ಸಂಗತಿ . ನಮ್ಮವರನ್ನು ನಮ್ಮವರೇ ಎಳೆದರೆ ಹೇಗೆ ? " 
            ಇರಲಿ ಇಷ್ಟೆಲ್ಲಾ ಆದರು ಪೇಜಾವರ ಶ್ರೀಗಳಿಗೆ ಕಳಂಕ ತರುವವರ ಪ್ರಯತ್ನ ವಿಫಲ ಪ್ರಯತ್ನ . ಪೇಜಾವರ ಶ್ರೀಗಳಂತಹ ಧೀಮಂತ ಯತಿ ಸಾರ್ವಭೌಮ ಮಾಧ್ವ ಸಮಾಜಕ್ಕೆ ದೊರೆತದ್ದು ನಮ್ಮೆಲ್ಲರ ಮಹೋನ್ನತ ಸೌಭಾಗ್ಯ .

   

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...