Tuesday 26 November 2013

ವಿಶ್ವೇಶ

ಇಂದಿನ ದಿನ ಸುದಿನವಾಯಿತು. ಉಡುಪಿ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಧಾರವಾಡ  ದಿಗ್ವಿಜಯದಲ್ಲಿದ್ದಾರೆ.  ನಮ್ಮ ಮನೆಗೆ ಆಗಮಿಸಿ ಪಾದಪೂಜೆಯನ್ನು ಸ್ವೀಕರಿಸಿ ಸ್ವಲ್ಪ ಹೊತ್ತು ರಮಣೀಯವಾಗಿ ಕಳೆದರು. ಗುರುಗಳು ದ್ವೈತದರ್ಶನ ಬ್ಲಾಗ್ ಅನ್ನು ವೀಕ್ಷಿಸಿ  ಪ್ರಶಂಸಿದರು. ಮತ್ತು ಅವರ ಬಗೆಗಿನ ಲೇಖನವಾದ "ವಿಶ್ವೇಶ ತೀರ್ಥರು ನಿಜ ಧರ್ಮ ರಕ್ಷಕರು" ಅದನ್ನು ಓದಿ ಸಂತುಷ್ಟರಾಗಿ ಈ ಪಾಮರನನ್ನು ಅನುಗ್ರಹಿಸಿದರು.. ಅದಲ್ಲದೆ ನನ್ನ ಸಂಗ್ರಹದಲ್ಲಿರುವ ಅನೇಕ ಚಿತ್ರಗಳನ್ನು  ಮುಂದಿಟ್ಟಾಗ ತಮ್ಮ ಆಶ್ರಮ ದಿನದಿಂದ ಹಿಡಿದು ಮೊನ್ನೆ ಮೊನ್ನೆಯ ಕಾರ್ಯಕ್ರಮಗಳ ಅಪರೂಪದ ದೃಶ್ಯಗಳನ್ನೂ ನೆನೆಸಿಕೊಂಡರು..ವಿಶ್ವಮಾನ್ಯರಿಂದ ಆಶ್ರಮ , ವಿದ್ಯಾಮಾನ್ಯ ರಿಂದ ವಿದ್ಯಾದಾನ, ಅನೇಕ ಮಠಾಧಿಪತಿಗಳೊಡನೆ ಸಂಗಮ, ಬಲು ಅಪರೂಪ ವೆನ್ನಿಸುವ ಸನ್ನಿವೇಶಗಳ ಚಿತ್ರಗಳನ್ನೆಲ್ಲ ಶ್ರೀಗಳು ಸಂತೋಷದಿಂದ ವೀಕ್ಷಿಸಿದರು.. "ಇದನ್ನೆಲ್ಲ ನಾವೂ ನೋಡಿಯೇ ಇರಲಿಲ್ಲ ! , ಅದ್ಭುತ ಸಂಗ್ರಹ " ಎಂದು ಬಹಳ ಸಂತೋಷ ಪಟ್ಟರು..ಇದರೊಂದಿಗೆ ತಾವು ಮೈಸೂರು ಮಹಾರಾಜರ ಜೊತೆಗೆ ಕುಳಿತ ಸಂದರ್ಭ , ವಿದ್ಯಾಮಾನ್ಯರೊಡನೆ ಸೋದೆಯಲ್ಲಿ ಶ್ರಮಾದಾನ , ವಿಶ್ವ ಪ್ರಸನ್ನರ ಆಶ್ರಮ ಪ್ರಸಂಗ ಇತ್ಯಾದಿಯಾಗಿ ವಿವರಿಸಿ ಹೇಳಿದರು.. ಕೊನೆಗೆ ನಾನು ಚಿಕ್ಕವನಿದ್ದಾಗ ರೋಗಬಾಧೆ ಇಂದ ಪರಿಹಾರ ಹೊಂದಲು ವಿಶ್ವೇಶ ತೀರ್ಥರ ಮಂತ್ರಕ್ಷತೆಯೇ ಕಾರಣ ಎಂದು ತಿಳಿದು ಸಂತೋಷಗೊಂಡು ಅನುಗ್ರಹ ಮಾಡಿದರು.. ಅವರ ನಿರಂತರ ಕಾರ್ಯ ಕೆಲಸ ಎಷ್ಟರಮಟ್ಟಿಗೆ ಇರುತ್ತದೆ ಎನ್ನುವದು ಯಾರಿಗೂ ಅಪರಿಚಿತವಲ್ಲ.. ಎಲಾರಿಗೂ ಅವರ ಕಾರ್ಯಕ್ಷಮತೆಯಾ ಬಗ್ಗೆ ಗೊತ್ತೇ ಇದೆ. ಅಂತಹ ಬಿಡುವಿನಲ್ಲೂ ಅವರು ಇಷ್ಟೊಂದು ಉಲ್ಲಸಿತರಾಗಿ ನಮ್ಮೊಡನೆ ಕಾಲ ಕಳೆದದ್ದು ತುಂಬಾ ಮುದವುಂಟು ಮಾಡಿದೆ.

Friday 15 November 2013

ಅಗಸ್ಟ್ ತಿಂಗಳಿನಲ್ಲಿ ಮಂತ್ರಾಲಯಕ್ಕೆ ಚಾತುರ್ಮಾಸ್ಯ ಸಮಯದಲ್ಲಿ ಹೋದಾಗ ಶ್ರೀ ಸುಯತೀಂದ್ರ ತೀರ್ಥರ ವರಕುಮರರಾದ ಶ್ರೀ ಸುಬುಧೆಂದ್ರ ತೀರ್ಥರು ನನ್ನ ಮೇಲೆ ಪರಮಾನುಗ್ರಹ ಮಾಡಿ ಕಳಿಸಿದ್ದಾರೆ. ಅವರ , ಅವರ ಗುರುಗಳ ಅಂತರ್ಯಾಮಿಯಾಗಿರುವ ಮಂತ್ರಾಲಯದ ಮಾಂತ್ರಿಕ ರಾಘವೇಂದ್ರ ಗುರುಗಳು , ಅವರ ಅಂತರ್ಯಾಮಿ ಶ್ರೀಮನ್ಮೂಲ ರಾಮದೇವರ ಅನುಗ್ರಹದಿಂದ ಈ ಭಾಗ್ಯ ನನ್ನದಾಗಿದೆ..ಈ  ಮಂತ್ರಾಲಯ ಭೇಟಿ ಮನ ಮುಟ್ಟುವಂತಿತ್ತು.. ಈ ಸಂದರ್ಭದಲ್ಲಿ ಮಂತ್ರಾಲಯದ ಪಂಡಿತ ಪುರಾಣಿಕ ಸಂಜೀವಾಚಾರ್ಯರ ಉಪಕಾರವನ್ನು ಭಕ್ತಿ ಪೂರ್ವಕವಾಗಿ ಸ್ಮರಿಸುತ್ತೇನೆ.. ಶ್ರೀಮಠದ ಉತ್ತರಾಧಿಕಾರಿ ಶ್ರೀ ಸುಬುಧೆಂದ್ರ ತೀರ್ಥರು " ಶ್ರೀಮಠದ,ರಾಯರ ಸೇವೆ ನಿರಂತರವಾಗಿ ನಿನ್ನಿಂದಾಗಲಿ" ಎಂದು ಅನುಗ್ರಹಿಸಿದರು.. ಅದರ ಜೊತೆಗೆ ಶ್ರೀಗಳು ತಾವು ಪೂರ್ವಾಶ್ರಮದಲ್ಲಿ ನಮ್ಮಂತಹ ಪಾಮರರಿಗಾಗಿಯೇ ಬರೆದ "ಮೃತ್ತಿಕಾ ಮಹಿಮೆ", " ಗುರುಪರಂಪರಾ ವ್ಯಾಖ್ಯಾನ" ಮತ್ತು "ಹಸ್ತೋದಕ ಮಹಿಮಾ" ಇನ್ನಿತರ ಪುಸ್ತಕಗಳನ್ನು ತಾವೇ ಮುತುವರ್ಜಿ ವಹಿಸಿ ಬಹಳ ಪ್ರೀತಿ ಇಂದ ಅನುಗ್ರಹ ಪೂರ್ವಕವಾಗಿ ನೀಡಿ ಇವುಗಳನ್ನ ಸದ್ಭಕ್ತರಿಗೆ , ಶ್ರೀಮಠದ ಶಿಷ್ಯರಿಗೆ ತಲುಪಿಸುವ ಕಾರ್ಯವಾಗಬೇಕೆಂಬ ಎಂಬ ಮಹದಾಶಯ ಹೊಂದಿದ್ದಾರೆ. ಇದು ಕೇವಲ ಪಾಮರರ ವಿಚಾರವಾದರೆ.. ಪಂಡಿತರಿಗೂ ಶ್ರೀಗಳು ಅನೇಕ ಗ್ರಂಥಗಳ ಲಭ್ಯತೆಯನ್ನು ಹೆಚ್ಚಿಸಲು  ಯೋಜನೆ ಹೊಂದಿದ್ದಾರೆ. ಶ್ರೀಮಠದ ವೆಬ್ ಸೈಟ್ ನಲ್ಲಿ ಶ್ರೀಘ್ರವೇ ಅನೇಕ ಪ್ರಾಚೀನ ( ಪ್ರಕಾಶಿತ-ಅಪ್ರಕಾಶಿತ) ಗ್ರಂಥಗಳನ್ನು ಪ್ರಕಟಿಸುವ ಮಹತ್ತರ ಯೋಜನೆಯನ್ನೂ ಶ್ರೀಪಾದಂಗಳವರು ಹೊಂದಿದ್ದಾರೆ..ಇದಲ್ಲದೆ ಇಂಟರ್ನೆಟ್ ಉಪಯೋಗಿಸಿ ಸಕಲ ಮಾಧ್ವರಿಗೂ ಅನುಕೂಲ ವಾಗುವಂತೆ ಆಚಾರ್ಯರ ಸಛ್ಚಾಸ್ತ್ರಗಳನ್ನೂ ಬೋಧಿಸುವ ದೊಡ್ಡ ಯೋಜನೆಯನ್ನು ಮಹಾ ಸ್ವಾಮಿಗಳು ಹೊಂದಿದ್ದಾರೆ.. ಇದರೊಂದಿಗೆ ಶ್ರೀಪಾದಂಗಳವರು ತಮ್ಮ ಪೂರ್ವಾಶ್ರಮದಲ್ಲೇ ೨೫ ವ್ಯಾಖ್ಯಾನಗಳ ಸಮೇತ ಶ್ರಿಮನ್ಯಾಯಸುಧಾ ಮಂಗಳವನ್ನು ಮಾಡಿ ಈಗ ಸನ್ಯಾಸವನ್ನು ತೆಗೆದುಕೊಂಡ ನಂತರ ಗುರುಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಶ್ರೀಮನ್ಯಾಯಸುಧಾ ಪಾಠವನ್ನು ವಿಶೇಷವಾಗಿ ನಡೆಸುತ್ತಿದ್ದಾರೆ.. ಶ್ರೀ ಸುಬುಧೇಂದ್ರ ತೀರ್ಥರು ಈ ಶತಮಾನದ ಶಕ್ತಿ ಎಂಬ ಪೇಜಾವರ ಶ್ರೀಗಳ ಮಾತು ನಿಜವಾಗಿಯೂ ಸತ್ಯ..:) :) ಧನ್ಯೋಸ್ಮಿ ..।। ಸರ್ವೋತ್ತಮ: ಶ್ರೀಶ: ಮೂಲರಾಮ: ಪ್ರಸೀದತು।।

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...