Wednesday 30 August 2023

"ಶ್ರೀರಾಘವೇಂದ್ರ ನಿಮ್ಮ ಚಾರು ಚರಣವ "



 * **  ಆರಾಧನಾ ವಿಶೇಷ  *** 


ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ ಅನನ್ಯ ಭಕ್ತರಾದ, ಶ್ರೀವರದೇಂದ್ರತೀರ್ಥರ ವಿದ್ಯಾಶಿಷ್ಯರಾದ,  ಶ್ರೀವಿಜಯದಾಸ-ಶ್ರೀಗೋಪಾಲದಾಸಾರ್ಯರ ಕರುಣಾಪಾತ್ರರಾದ, ಹರಿದಾಸಕುಲಸನ್ನುತರಾದ, ಅಪರೋಕ್ಷ ಜ್ಞಾನಿಗಳಾದ,  "ಶ್ರೀಶ್ರೀಜಗನ್ನಾಥದಾಸಾರ್ಯರು" ಭವಭಯನಿವಾರಕರಾದ, ಸಂಸಾರ ಸಾಗರದಿಂದ ನಮ್ಮನ್ನು ಪಾರುಗಾಣಿಸುವ ಮಹಾನ್ ಗುರುಗಳಾದ "ಶ್ರೀರಾಘವೇಂದ್ರಗುರುಸಾರ್ವಭೌಮ" ರನ್ನು ಕುರಿತು ರಚಿಸಿರುವ  "ಶ್ರೀರಾಘವೇಂದ್ರ ನಿಮ್ಮ ಚಾರು ಚರಣವ " ಎನ್ನುವ ಪ್ರಸಿದ್ಧ ಕೀರ್ತನೆಯಲ್ಲಿ "ಮೂಲರಾಮಾರ್ಚಕ"ರಾದ ಶ್ರೀರಾಘವೇಂದ್ರಪ್ರಭೃತಿಗಳನ್ನು"ಮೂಲರಾಮನ ಪಾದಕೀಲಾಲಜ ಮಧುಪ" ಎಂದು ಉತ್ಕೃಷ್ಟವಾಗಿ ವರ್ಣಿಸಿರುವ ಪರಿ.


ಶ್ರೀ ರಾಘವೇ೦ದ್ರ ನಿಮ್ಮ - ಚಾರುಚರಣವ
ಸಾರಿದೆ ಶರಣ ಮ೦ದಾರ ಕರುಣವ || ಪ ||
ಘೋರ ಭಯವನದಿ ತಾರಿಸು ತವಕದಿ
ಸೂರಿ ಸುಧೀ೦ದ್ರ ಕುಮಾರ ಉದಾರ || ಅ ||

ಮುನಿರಾಯ ನಿಮ್ಮ ಪಾದ - ವನರುಹ ಧ್ಯಾನ
ಪ್ರಣವ ಸುಸ್ತವನ - ಅರ್ಚನೆ ಮಾಳ್ಪ ನಾನಾ
ಜನರ ವಾ೦ಛಿತವೀವ ಗುಣಪೂರ್ಣ ಜ್ಞಾನ
ಧನವ ಪಾಲಿಸೆನಗೀ-ಕ್ಷಣ ನಿನ್ನವಾ
ಮನುಜನ ಪ್ರತಿದಿನ ದಿನದಿ ದಣಿಸುವುದು
ಘನವೇ ಗುರುವೇ ಪಾವನತರಚರಿತ || ೧ ||

"ಮೂಲರಾಮನಪಾದ- ಕೀಲಾಲಜ ಮಧುಪ"
ಬಾಲಕನ ಬಿನ್ನಪ - ಲಾಲಿಸೋ ಮುನಿಪ
ತಾಳಲಾರೆನೊ ತಾಪ - ತ್ರಯದ ಸ೦ತಾಪ
ಕೇಳೊ ವಿಮಲಜ್ಞಾನ - ಶೀಲ ಸ್ವರೂಪ
ಭೂಲಲನಾಧವ ಕೋಲನ೦ದನಾ
ಕೂಲಗ ವರಮ೦ತ್ರಾಲಯ ನಿಲಯ || ೨ ||

ಕಲಿಕಲ್ಮಷ ವಿದೂರ - ಕುಜನಕುಠಾರ
ನಳಿನಾಕ್ಷ ವಿಮಲ ಶ್ರೀ- ತುಲಸಿಯ ಹಾರ
ಗಳಶೋಭಿತ ಕಮ೦ಡಲು ದ೦ಡಧರ
ಅಲವಬೊಧರಮತ - ಜಲಧಿ ವಿಹಾರ
ಸುಲಲಿತ ಕರುಣಾ೦ಬುಧಿ 'ಜಗನ್ನಾಥವಿಠ್ಠಲ'-
ನೊಲುಮೆಯ ಪಡೆದಿಳೆಯೊಳು ಮೆರೆವ || ೩ ||




*** ಸದ್ವೈಷ್ಣವಕುಲಾವತಂಸರಾದ ಶ್ರೀಜಗನ್ನಾಥದಾಸಾರ್ಯರ ಸನ್ನಿಧಾನದಲ್ಲಿರುವ , ಶ್ರೀಜಗನ್ನಾಥದಾಸಾರ್ಯರ ಪುತ್ರರಾದ ಶ್ರೀದಾಮೋದರ ದಾಸಾರ್ಯರ ಸ್ವಹಸ್ತಲಿಖಿತ ಹಸ್ತಪ್ರತಿಯನ್ನೂ ಕೂಡ ಇಂದಿಗೂ ಕಾಣಬಹುದು.







ಸಂಗ್ರಹ: ಸಮೀರ ಜೋಶಿ

Saturday 12 August 2023

ದಿನಕರನುದಿಸಿದನು…. ಧರೆಯೊಳಗೆ…. ಶ್ರೀರಾಘವೇಂದ್ರವಿಜಯಕಾರರ ದೃಷ್ಟಿಯಲ್ಲಿ


ಶ್ರೀರಾಘವೇಂದ್ರವಿಜಯದ ಕಣ್ಣಲ್ಲಿ ಶ್ರೀರಾಯರ ಅವತಾರ ಗುರುಸಾರ್ವಭೌಮರ ವರ್ಧಂತೀ ಮಹೋತ್ಸವ – ಶ್ರೀರಾಯರು ಭೂಲೋಕದಲ್ಲಿ ಅವತರಿಸಿದ ಪುಣ್ಯಪ್ರದ ದಿವಸ. ಇತಿಹಾಸದುದ್ದಕ್ಕೂ ತಮ್ಮ ಪರಾಕ್ರಮ, ಅನೇಕಕಲಾಪ್ರಾವೀಣ್ಯದಿಂದ, ಪಾಂಡಿತ್ಯಾದಿ ಸದ್ಗುಣಗಳಿಂದ ಜಗದ್ವಿಖ್ಯಾತವಾದ ಮನೆತನದಲ್ಲಿ ಸಕ್ಷಾತ್ ಪ್ರಹ್ಲಾದರಾಜರೇ ಅವತರಿಸಿದ ಪರಮಮಂಗಲಕರ ದಿನ.

ಶ್ರೀರಾಘವೇಂದ್ರಗುರುಸಾರ್ವಭೌಮರ ದಿವ್ಯವಾದ ಚರಿತ್ರೆಯನ್ನು ತಿಳಿಸುವ ಮಹೋಪಕಾರವನ್ನು ಮಾಡಿದ ನಾರಾಯಣಾಚಾರ್ಯರ ಆಪ್ತತ್ವ, ಈ ಗ್ರಂಥದ ಪ್ರಸ್ತುತಿಯ ಹಿನ್ನೆಲೆ, ಆ ಗ್ರಂಥದಲ್ಲಿ ಪ್ರತಿಪಾದಿತವಾಗಿರುವ ಮಧ್ವವಿಜಯದ ಪ್ರತಿಬಿಂಬತ್ವ ಇವೆಲ್ಲವೂ ಶ್ರೀರಾಘವೇಂದ್ರವಿಜಯದ ಪರಮಪ್ರಾಮಾಣಿಕತ್ವವನ್ನು, ಶ್ರೆಷ್ಠತ್ವವನ್ನು ತಿಳಿಸುವ ಪ್ರಮುಖ ವಿಚಾರಗಳು.

ಶ್ರೀರಾಘವೇಂದ್ರಗುರುರಾಜರೇ ಇದನ್ನು ಪರಿಶೀಲಿಸಿ ಪ್ರಮಾಣೀಕರಿಸಿರುವದರಿಂದ ಇದರ ಮೌಲ್ಯ ಎಷ್ಟು ಎಂಬುದು ಊಹೆಗೂ ನಿಲುಕದ್ದು. ಅಂತಹ ಪರಮ ಶ್ರೇಷ್ಠ ಮಹಾಕಾವ್ಯ ಶ್ರೀರಾಘವೇಂದ್ರವಿಜಯ.

ಶ್ರೀರಾಘವೇಂದ್ರವಿಜಯದಲ್ಲಿ ರಾಯರ ಅವತಾರದ ಪ್ರಸ್ತುತಿಯು ತೃತೀಯಸರ್ಗದಲ್ಲಿ ಅವರ ಶ್ರೇಷ್ಠವಂಶದ ಹಿನ್ನೆಲೆ,ಶ್ರೀತಿಮ್ಮಣ್ಣಾರ್ಯರ ಹಾಗೂ ಅವರ ಪೂರ್ವೀಕರ ಶ್ರೇಷ್ಠ ತಪಸ್ಸು, ವಿದ್ಯಾದಿ ವೈಭವಗಳ ಅವರ ಚರಿತ್ರೆಯ ಸಂಕ್ಷಿಪ್ತ ಪರಿಚಯವನ್ನು, ಶ್ರೀರಾಯರ ಅವತಾರ ವೃತ್ತಾಂತವನ್ನು ಶ್ರೀರಾಘವೇಂದ್ರವಿಜಯಕಾರರು ವಿವರಿಸಿದ್ದಾರೆ.



ಗೌತಮರ ಮಹಿಮಾತಿಶಯಗಳು :

ಸರ್ವೋತ್ತಮದೇವತೆಯಾದ ನಾರಾಯಣನಲ್ಲಿ ವಿಶೇಷವಾದ ಭಕ್ತಿಜ್ಞಾನಾದಿಗಳನ್ನೇ ಪ್ರಧಾನವಾಗಿ ಉಳ್ಳ, ಸುದ್ಗಿಣಗಳಿಗೇ ಆಶ್ರಯಭೂತರಾಗಿದ್ದ ಋಷಿಗಳ ಸಮೂಹದಲ್ಲಿ ಪ್ರಧಾನರಾದ ಗೌತಮನಾಮ ಮುನಿಗಳು ಭೂಲೋಕದಲ್ಲಿದ್ದರು. ಇವರು ಅನುಗ್ರಾಹಕತ್ವ ಮೊದಲಾದ ಗುಣಗಳಿಗೆ ಪ್ರಸಿದ್ಧರು. ಅಸುರಮೋಹನಾರ್ಥವಾಗಿ ನ್ಯಾಯಸೂತ್ರವೆಂಬ ತರ್ಕಶಾಸ್ತ್ರವನ್ನು ಮಾಡಿ ಸಜ್ಜನರ ಉದ್ಧಾರವನ್ನು ಮಾಡಿದವರು ಹಾಗೂ ಶ್ರೀವೇದವ್ಯಾಸದೇವರ ಅವತಾರಕ್ಕೆ ಕಾರಣರಾದವರು. ಹೀಗೆ ತಪಸ್ಸು, ಅವರ ಮಹಿಮೆಯ ವರ್ಣನೆಗಳೊಂದಿಗೆ ಶ್ರೀರಾಯರ ಉತ್ಪತ್ತಿವಿಚಾರವು ಈ ಮಹಾಕಾವ್ಯದಲ್ಲಿ ತಿಳಿಸಲ್ಪಟ್ಟಿದೆ.




ಗೌತಮವಂಶದ ವರ್ಣನೆ:

ಈ ರೀತಿ ಗೌತಮರಂತೆಯೇ ಶ್ರೇಷ್ಠ ಸದ್ಗುಣಗಳೇ ತುಂಬಿದ ಶ್ರೇಷ್ಠರು ಅವತರಿಸಿದ ಶ್ರೇಷ್ಠವಂಶ ಗೌತಮರ ವಂಶ. ಈ ವಂಶದಲ್ಲಿನ ಬಹುಜನರು ಮೋಕ್ಷವೆಂಬ ಶ್ರೇಷ್ಠ ಫಲವನ್ನೇ ಪಡೆದವರು. ಒಳ್ಳೆಯ ನಡತೆ ಉಳ್ಳವರು, ಅಳಿಯಿಲಿಕ್ಕಸಾಧ್ಯವಾದ ಎತ್ತರದ ವ್ಯಕ್ತಿತ್ವ ಉಳ್ಳ ಬ್ರಾಹ್ಮಣ ಶ್ರೇಷ್ಠರು ಈ ಗೌತಮವಂಶದಲ್ಲಿ ಅವತರಿಸಿದ್ದರು.


ಇಂತಹ ಅನೇಕ ಗೌತಮ ವಂಶಗಳಲ್ಲಿ ಶ್ರೇಷ್ಠವಾದ ವಂಶವೊಂದಿತ್ತು. “ಜನಕೋಮಪಕನ್ಯಕೇsನ್ವಯೇಸ್ಮಿನ್” ತಂದೆಯ ಹೋಲಿಕೆಯಿಳ್ಳ ಹೆಣ್ಣುಮಕ್ಕಳುಳ್ಳ, “ಅನುಜಾತಸಮಾನಪೂರ್ವಕಾತೇ”  ಸದ್ಗುಣಗಳ ವಿಚಾರದಲ್ಲಿ ತಮ್ಮಂದಿರೆಲ್ಲ ಅಣ್ಣಂದಿರ ಸಮಾನವಾಗಿರುವ, “ನಿಜತಾತಾಧಿಕನಂದನಃ” ಸದ್ಗುಣಗಳು, ವಿದ್ಯಾಪ್ರಭಾವ ಮುಂತಾದ ವಿಷಯಗಳಲ್ಲಿ ತಂದೆಯನ್ನೂ ಮೀರಿಸುವ ಪುತ್ರರತ್ನರು ಹುಟ್ಟುತ್ತಿದ್ದ ಆ ಹಿರಿದಾದ ವಂಶದಲ್ಲಿ ಶ್ರೀಕೃಷ್ಣಾಚಾರ್ಯರೆಂಬ ಶ್ರೇಷ್ಠರು ಇದ್ದರು.



ಪೂರ್ವಿಕರ ಮಹಿಮೆ:

ಶ್ರೀಕೃಷ್ಣಾರ್ಯರು ವಂಶಪಾರಂಪರ್ಯವಾಗಿ ಬಂದ ಶ್ರೇಷ್ಠವಾದ ಬ್ರಾಹ್ಮಣವಿದ್ಯೆಯೊಂದಿಗೆ, ಬ್ರಾಹ್ಮಣಯೋಗ್ಯವಾದ ಅನೇಕರೀತಿಯ ವಿದ್ಯೆಗಳನ್ನು ಧರಿಸಿದವರಾಗಿದ್ದರು. ಸದ್ಭುತ ವೀಣಾವಾದನವನ್ನೂ ಗಳಿಸಿಕೊಂಡಿದ್ದರು. ಅಂತಹ ಕೃಷ್ಣಾರ್ಯರು “ಕೃಷ್ಣಭೂಬಲಾರೇಃ ನಿಜಗಾಂಧರ್ವಕಲಾಂ ಉಪದಿಶ್ಯ…” ಅಖಿಲ ಕರ್ಣಾಟಕ ರತ್ನಸಿಂಹಾಸನಾಧೀಶ್ವರನಾದ ಶ್ರೀಕೃಷ್ಣದೇವರಾಯನಿಗೆ ನಿಜಗಂಧರ್ವವಿದ್ಯೆಯನ್ನು ಉಪದೇಶಿಸಿದವರು. ಗುಣವಾರಿಧಿಗಳಾದ ಶ್ರೀಕೃಷ್ಣಾರ್ಯರಿಗೆ ಸುವರ್ಣಮಯವಾದ ಮೇರುಪರ್ವತದಂತಿರುವ ಕನಕಾಚಲಾರ್ಯರೆಂಬ ಪುತ್ರರು ಹುಟ್ಟಿದರು.

ಶ್ರೀ ಧೀರೇಂದ್ರ ತೀರ್ಥರು

 || ಶ್ರೀಮನ್ಮೂಲರಾಮೋ ವಿಜಯತೆ ||                             ||ಶ್ರೀಗುರುರಾಜೋ ವಿಜಯತೆ||

ಪೂರ್ವಾಶ್ರಮ-    

                          ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ೧೦೦೮ ಶ್ರೀ ಧೀರೇಂದ್ರ ತೀರ್ಥರ ಬಗ್ಗೆ ಮಾತನಾಡಲು ನನ್ನ ಯೋಗ್ಯತೆ ಸಾಲದು. ಶ್ರೀ ರಾಘವೇಂದ್ರ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀ ವಾದೀಂದ್ರ ತೀರ್ಥರ ಗುರುಸರ್ವಭೌಮರ ಪೂರ್ವಾಶ್ರಮ ಪುತ್ರರ ಹೆಸರು ಶ್ರೀ ಜಯರಾಮಚಾರ್ಯರು ಎಂದು. ಶ್ರೀ ಜಯರಾಮಾಚಾರ್ಯರು ತಮ್ಮ ಸಕಲ ವಿದ್ಯಾಭ್ಯಾಸಗಳನ್ನು ತಮ್ಮ ತಂದೆಗಳಾದ ಶ್ರೀ ಶ್ರೀನಿವಾಸಾಚಾರ್ಯರಲ್ಲಿ ಅರ್ಥಾತ್  ಶ್ರೀಮದಾಚಾರ್ಯರ  ಪೀಠವನ್ನು  ಶ್ರೀಮದುಪೇಂದ್ರ ತೀರ್ಥರ ನಂತರ ಆಳಿದ ಶ್ರೀ ವಾದೀಂದ್ರ ತೀರ್ಥ ಗುರುಸರ್ವಭೌಮರಲ್ಲೇ ಆಯಿತು. ಅವರಲ್ಲಿ ಜನ್ಮ ಪಡೆಯುವದಲ್ಲದೇ ಅವರಲ್ಲೇ  ವಿದ್ಯಾಭ್ಯಾಸ ಮಾಡಿದ ಮಹಾ ಭಾಗ್ಯ ಶ್ರೀ ಧೀರೇಂದ್ರ ತೀರ್ಥ ಶ್ರೀಪಾದಂಗಳವರದ್ದು. ಆಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪರಮಾನುಗ್ರಹದಿಂದ ವಿಲಕ್ಷಣ ಪಾಂಡಿತ್ಯ ಗಳಿಸಿ ಪೂರ್ವಾಶ್ರಮದಲ್ಲೇ ದೇಶದ ಉದ್ದಗಲಕ್ಕೂ ಸಂಚರಿಸಿ ವಾದಿ ದಿಗ್ವಿಜಯ , ಶ್ರೀಮದಾಚಾರ್ಯರ ಸಿದ್ಧಾಂತ ಮಂಡನೆ ಇತ್ಯಾದಿಗಳನ್ನು ಮಾಡಿ ಸಂಸ್ಥಾನದ ಸೇವೆಗೈಯುತ್ತಿದ್ದರು. ಶ್ರೀ ವಾದೀಂದ್ರ ತೀರ್ಥರು ತತ್ವಪ್ರಕಾಶಿಕಾ ಟಿಪ್ಪಣಿಯಾದ  'ಮೀಮಾಂಸಾ ನಯದರ್ಪಣ' , 'ತತ್ವೊದ್ಯೋತ ಟಿಪ್ಪಣಿ ', 'ಭೂಗೋಳ-ಖಗೋಳ ವಿಚಾರಃ' ,   ' ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಮಠಾರ್ಚಾ ಗತಿಕ್ರಮ' , 'ಗುರುಗುಣಸ್ತವನಂ','ನವ್ಯದುರುಕ್ತಿ ಶಿಕ್ಷಾ (ಪೂರ್ವಾಶ್ರಮದಲ್ಲಿ ರಚಿಸಿದ್ದು)' ಹೀಗೆ    ಅನೇಕ ಪ್ರೌಢ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಘವೇಂದ್ರ ಗುರುಗಳ ಗ್ರಂಥರಚನ ಶೈಲಿ , ಸಾಮರ್ಥ್ಯ , ಮಹತ್ವ ಎಲ್ಲವನ್ನೂ ವಿಶಿಷ್ಟವಾಗಿ ಸ್ತವನ ಮಾಡುವ ಕೃತಿಯೇ "ಶ್ರೀಗುರುಗುಣಸ್ತವನ" . ಇದನ್ನು ಶ್ರೀ ವಾದೀಂದ್ರ  ತೀರ್ಥರು ಶ್ರೀ ಗುರುಸಾರ್ವಭೌಮರಿಗೆ ಸಮರ್ಪಿಸಿದಾಗ ಶ್ರೀರಾಯರ ಮೂಲಬೃಂದಾವನವು ಅವರ  ಸಮ್ಮತಿ ತಿಳಿಸಲು ಅಲುಗಾಡಿತು. ಅಂತಹ ಮಾಹಾನುಭಾವರು,ರಾಯರನ್ನು ಅರಿತವರು ಶ್ರೀ ವಾದೀಂದ್ರ ತೀರ್ಥರು. ಶ್ರೀ ಜಯರಾಮಚಾರ್ಯರು ಪ್ರೌಢಾವಸ್ಥೆಯಲ್ಲಿಯೇ 'ಗುರುಗುಣಸ್ತವನ'ದಲ್ಲಿ ಉತ್ಸುಕರಾಗಿ ,ಅದನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ಅದಕ್ಕೆ ತಮ್ಮದೇ ಒಂದು ಪ್ರೌಢ ವ್ಯಾಖ್ಯಾನ ರಚನೆ ಮಾಡಿ ಶ್ರೀ ವಾದೀಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಅದನ್ನು ಸಮರ್ಪಿಸಿದರು ( ಇದೆ ಗ್ರಂಥಕ್ಕೆ ಶ್ರೀ ವಾದೀಂದ್ರ ತೀರ್ಥರ ಪಟ್ಟದ ಶಿಷ್ಯ ಶ್ರೀ ವಸುಧೇಂದ್ರ ತೀರ್ಥರ ವ್ಯಾಖ್ಯಾನವೂ ಇದೆ ) .  ಆಗ ಶ್ರೀ ವಾದೀಂದ್ರ ತೀರ್ಥರು , ತಮ್ಮ ಪೂರ್ವಾಶ್ರಮ ಪುತ್ರರೂ ಹಾಗು ಸಂಸ್ಥಾನದ ಮಹಾ ಮೇಧಾವಿಗಳೂ ಆಗಿರುವ ಇವರು ಪೀಠಕ್ಕೆ ಬಂದರೆ ಸಂಸ್ಥಾನದ ಶ್ರೇಯೋಭಿವೃದ್ಧಿ ಆಗುವದು ಅನ್ನುವದನ್ನ ಅರಿತು  ಆಚಾರ್ಯರಿಗೆ ಸೂಕ್ಷ್ಮವಾಗಿ " ಜಯರಾಮ ! ಇಷ್ಟಾದರೆ ಸಾಲದಪ್ಪ ನಿಜವಾದ ವೈರಾಗ್ಯ ಬೇಕು " ಎಂದು ನುಡಿದರು.





              ಶ್ರೀ ಜಯರಾಮಚಾರ್ಯರು , ಶ್ರೀ ವಾದೀಂದ್ರರ ಮಾತಿನಂತೆ ವೈರಾಗ್ಯವನ್ನನುಸರಿಸುತ್ತ  ಸಂಚಾರ ಪ್ರಾರಂಭ ಮಾಡಿದರು . ಇತ್ತ ಕಾಲ ಕ್ರಮೇಣ ಶ್ರೀ ವಾದೀಂದ್ರ ತೀರ್ಥರು , ಶ್ರೀ ವಸುಧೇಂದ್ರ ತೀರ್ಥರಿಗೆ ಮಹಾ ಸಂಸ್ಥಾನ ಒಪ್ಪಿಸಿ ಮಂತ್ರಾಲಯದಲ್ಲಿ ಶ್ರೀ ಗುರುರಾಜರ ವೃಂದಾವನದ ಪಕ್ಕದಲ್ಲಿ , ಶ್ರೀ ಗುರುರಾಜರಿಗಾಗಿಯೇ ಸಂಕಲ್ಪಿಸಿದ ವೃಂದಾವನವನ್ನು , ಗುರುರಾಜರ ಅಣತಿಯಂತೆ , ಆದೇಶದಂತೆ ಶ್ರೀ ವಾದೀಂದ್ರ ತೀರ್ಥರು ಪ್ರವೇಶಿಸಿದರು. ಘಟನೆಯೊಂದೆ ಸಾಕು ಗುರುರಾಜರು ಶ್ರೀ ವಾದೀಂದ್ರ ತೀರ್ಥರ ಮೇಲೆ ಅದೆಷ್ಟು ಪ್ರೀತಿ ತೋರಿದ್ದಾರೆ ? ಅದೆಷ್ಟು ಅನುಗ್ರಹ ಮಾಡಿದ್ದಾರೆ ? ಅಂತ ತಿಳಿಯಲು. ಹೀಗೆ ಶ್ರೀ ವಾದೀಂದ್ರ ತೀರ್ಥರು ವೃಂದಾವನಸ್ಥರಾದ ವಿಷಯ ಕೇಳಿ ಶ್ರೀ ಜಯರಾಮಚರ್ಯರಿಗೆ ಸಿಡಿಲು ಬಡಿದಂತಾಗಿ ಅನಾಥ ಪ್ರಜ್ಞೆ ಮೂಡಿತು. ಆಚಾರ್ಯರ ವೈರಾಗ್ಯವೃದ್ದಿಗೆ ಇದು ಸಹ ಕಾರಣವಾಯಿತು .

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...