Friday 6 October 2023

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ


ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕೃತಿ.

ಶ್ರೀರಾಯರೊಂದಿಗೆ ಬಾಲ್ಯದಲ್ಲಿ ಜೊತೆಜೊತೆಗೇ ಅಧ್ಯಯನ ನಡೆಸಿದವರೂ, ಸ್ವತಃ ಶ್ರೀರಾಯರ ಪೂರ್ವಾಶ್ರಮ ಅಕ್ಕ ವೆಂಕಮ್ಮನವರ ಮಕ್ಕಳೂ, ಶ್ರೀರಾಘವೇಂದ್ರಸ್ವಾಮಿಗಳಿಗೆ ಆರಂಭಿಕಗ್ರಂಥಗಳನ್ನು ಪಾಠ ಹೇಳಿದ ಶ್ರೀಲಕ್ಷ್ಮೀನರಸಿಂಹಾಚಾರ್ಯರ ಪುತ್ರರೂ ಆದ ಶ್ರೀನಾರಾಯಣಾಚಾರ್ಯರೇ ಈ ಗ್ರಂಥದ ಕರ್ತೃಗಳು. ( ಶ್ರೀರಾಯರ ಪೂರ್ವಾಶ್ರಮ ಸೋದರಳಿಯ).
ದ್ವಿತೀಯಸರ್ಗದಲ್ಲಿ ಸ್ವತಃ ಶ್ರೀಮನ್ಮಧ್ವಾಚಾರ್ಯರೇ ಮೂಲರಾಮದೇವರ ಬಗ್ಗೆ ತಮ್ಮ ಶಿಷ್ಯರಿಗೆ ನೀಡಿದ ಉಪದೇಶಾತ್ಮಕವಾದ ಆದೇಶವನ್ನು ದಾಖಲಿಸಿದ್ದಾರೆ.

ಸಾ ಯತ್ರ ರಾಮಪ್ರತಿಮಾಸ್ತಿ ತತ್ರ
ಚತುಃ ಪುಮರ್ಥೀ ಸತತಂ ಚಕಾಸ್ತಿ |
ಆದಿಶ್ಯ ಚೈವಂ ಗುರುಣೈವ ದತ್ತಾಮ್
ಅಥಾರ್ಚಯತ್ತಾಮನಿಶಂ ಯಮೀಂದ್ರಾಃ ||
- ಶ್ರೀರಾಘವೇಂದ್ರವಿಜಯ


ಈ ಮಹದ್ಗ್ರಂಥಕ್ಕೆ ಶ್ರೀರಾಘವೇಂದ್ರತೀರ್ಥರ ಪೂರ್ವಾಶ್ರಮ ಸದ್ವಂಸಜಾತರೂ, ಶ್ರೀಧೀರೇಂದ್ರತೀರ್ಥರ ಮಕ್ಕಳಾದ, ಶ್ರೀಸುಜ್ಞಾನೇಂದ್ರತೀರ್ಥರ ಪಿತೃಪಾದರೂ ಆದ, ಸಾತ್ವಿಕರೂ ಮಹಾನ್ ವಿದ್ವಾಂಸರೂ ಆದ ಶ್ರೀರಾಮಾಚಾರ್ಯರು 'ಬಾಲಬೋಧಿನಿ' ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ.
ಅಲ್ಲಿ ಈ ಶ್ಲೋಕವನ್ನು ವ್ಯಾಖ್ಯಾನಿಸುವಾಗ,

"ಸಾ ರಾಮಪ್ರತಿಮಾ ಯತ್ರ ವರ್ತತೇ, ತತ್ರ ಚತುರ್ಣಾಂ ಪುಮರ್ಥಾನಾಂ ಸಮಾಹಾರಾಃ ಅನವರತಂ ದೀಪ್ಯಮಾನಾ ಭವತಿ | ಏವಂ ಪ್ರಕಾರೇಣ "ಆಚಾರ್ಯೇಣ" ಆಜ್ಞಪ್ಯ ತೇನ ದತ್ತಾಂ ತಾಂ ಪ್ರತಿಮಾಂ ಶ್ರೀಮದಾಚಾರ್ಯಾಣಾಂ ಶಿಷ್ಯಪ್ರಶಿಷ್ಯಸನ್ಯಾಸಿನಃ ಪೂಜಾಂ ಕೃತವಂತಃ ||" - ಬಾಲಬೋಧಿನಿವ್ಯಾಖ್ಯಾನಮ್

ಎಂದು, ಈ ಮೂಲರಾಮಪ್ರತಿಮೆಯು ಎಲ್ಲಿರುತ್ತದೆಯೋ ಅಲ್ಲೊ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧ ಪುರುಷಾರ್ಥಗಳೂ ಸ್ಫುಟವಾಗಿ ಶೋಭಿಸುವವು ಎಂದು ಮಹಿಮೋಪದೇಶವನ್ಮು ಮಾಡಿದ್ದಾರೆ. ಆ ಪ್ರಕಾರವಾಗಿಯೇ ಶ್ರೀಮದಾಚಾರ್ಯರಿಂದಲೇ ಆಜ್ಞಪ್ತರಾದ ಅವರ ಶಿಷ್ಯಪ್ರಶಿಷ್ಯರು ಮೂಲರಾಮಾರ್ಚನೆ ಮಾಡುತ್ತ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...