Wednesday 21 November 2012

ಶ್ರೀ ರಾಮಲಿಂಗೇಶ್ವರ ದೇವಾಲಯ , ಹುನಗುಂದ ಗ್ರಾಮ , ಬಾಗಲಕೋಟೆ .

ಶ್ರೀ ರಾಮಲಿಂಗೇಶ್ವರ ದೇವಾಲಯ , ಹುನಗುಂದ ಗ್ರಾಮ , ಬಾಗಲಕೋಟೆ .
ವಿಶೇಷತೆ -  ಇದರ ವಿಶೇಷತೆ ಏನು ಅಂದ್ರೆ ಇದು ಪುರಾತನ ಚಾಲುಕ್ಯ ಶೈಲಿಯಲ್ಲಿ ಕ್ರಿ.ಶ 1074ರಲ್ಲಿ ಎರಡನೇ ಸೋಮೇಶ್ವರನ ಆಳ್ವಿಕೆಯಲ್ಲಿ ನಿರ್ಮಿತವಾದ ವಿಶಾಲ ಪ್ರಾಂಗಣ 16 ಚೌರಾಸ ಸ್ಥಂಭಗಳು ಇರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದೆ. ಈ ರಾಮಲಿಂಗೇಶ್ವರ ಇಂದಿಗೂ ಹುನಗುಂದದ ಮಾಧ್ವ ಕುಟುಂಬದಿಂದ ಪೂಜೆಗೊಳ್ಳುತ್ತಿದ್ದಾನೆ . ಇದರ ಅರ್ಚಕರು ರಾಘವೇಂದ್ರ ಸ್ವಾಮಿಗಳವರ ಮಠದ ಶಿಷ್ಯರಾದ ಹುನಗುಂದಗ್ರಾಮದ ಜೋಷಿ ಮನೆತನದವರು . ಈಗ ಸಧ್ಯ ಮೂರು ಜೋಷಿ ಮನೆತನಗಳು ಪೂಜಾ ಹೊಣೆ ಹೊತ್ತುಕೊಂಡಿವೆ . ಮತ್ತು ರುದ್ರದೇವರು ಪರಮವೈಷ್ಣವರು . ಇಲ್ಲಿ ಪರಮವೈಷ್ಣವನಿಗೆ ವೈಷ್ಣವರಿಂದಲೇ ಪೂಜೆ ಇದೆ . ಇಲ್ಲಿ ಅನೇಕ ಯತಿಗಳು,ಸಾಧು ಸಂತರು ಬಂದು ಹೋಗಿದ್ದಾರೆ ಎಂದು ನಂಬಿಕೆ ಇದೆ . 
ಇತಿಹಾಸ -ಇದು ರಾಮಾಯಣದ ಕಾಲದಲ್ಲಿ ಶ್ರೀರಾಮದೇವರು ರಾವಣನನ್ನು ಸಂಹಾರ ಮಾಡಿದಾಗ ಬ್ರಹ್ಮ ಹತ್ಯಾ ದೋಷ ಬರಬಾರದು ಎಂದು ಪ್ರಯಶ್ಚಿತ್ತಕ್ಕಾಗಿ ದಂಡಕಾರಣ್ಯ ಪ್ರದೇಶದಲ್ಲಿ ರುದ್ರದೇವರ ಲಿಂಗಗಳನ್ನು ಪ್ರತಿಷ್ಠಾಪಾನೆ ಮಾಡಿದನಂತೆ .ಈ ರಾಮಪೂಜಿತ ರುದ್ರದೇವರ ಲಿಂಗಗಳೇ ಶ್ರೀರಾಮಲಿಂಗ ಎಂದು ಪ್ರಸಿದ್ಧವಾದವು. ರಾಮೇಶ್ವರದ ಲಿಂಗವೂ ಇದಕ್ಕೆ ಉದಾಹರಣೆಯಾಗಿರಬಹುದು . ಈ ರಾಮಲಿಂಗೇಶ್ವರ ದೇವಾಲಯಗಳನ್ನು ಬಹಳ ಕಡೆ ನೋಡಬಹುದು . ಕಾಲ ಕ್ರಮೇಣ ಕೆಲವು ಪೂಜೆ ಇಲ್ಲದೆ ಹಾಗೆ ಇದ್ದರೆ ಇನ್ನು ಕೆಲವು ಶೈವರ(ಒಕ್ಕಲಿಗರು ಹಾಗು ಇನ್ನಿತರರು)  ಪಾಲಾಗಿವೆ. ಮತ್ತು ಬ್ರೀಟಿಷರ ಕಾಲದಲ್ಲಿ ಇದು ಒಮ್ಮೆ ಜೀರ್ಣ ಗೊಂಡಿತ್ತಂತೆ ಇದನ್ನು ಆಗಿನ ಸ್ವಾತಂತ್ರ್ಯ ಹೋರಾಟಗಾರರು ಈ ದೇವಸ್ಥಾನವನ್ನು( ಹುನಗುಂದದ ದೇವಸ್ಥಾನವನ್ನು) ಸ್ವಾತಂತ್ರ್ಯ ಸಂಗ್ರಾಮದ ರಹಸ್ಯ ಸಂದೇಶ ಹಾಗೂ ಸುರಂಗ ಮಾರ್ಗ ಸೂಚಿಯಾಗಿ ಬಳಸುತ್ತಿದ್ದರಂತೆ. ಬಾಗಲಕೋಟೆಯ ಇತರ ದೇವಸ್ಥಾನಗಳಿಗೆ ಸುರಂಗ ಇದೆ ಎಂದು ಇಲ್ಲಿನ ಕೆತ್ತನೆ ಸೂಕ್ಷ್ಮವಾಗಿ ಹೇಳುತ್ತದೆಯಂತೆ. ಇಲ್ಲಿ ಅನೇಕ ಕುರುಹುಗಳನ್ನು ಇಂದಿಗೂ ಕಾಣಬಹುದು . ಆದರೆ ಸಂಪೂರ್ಣ ಅರ್ಥ ತಿಳಿಯುವದು ಸಾಧ್ಯವಾಗಿಲ್ಲ . ಕಾಲಾಂತರದಲ್ಲಿ ಅನೇಕ ರಾಜರುಗಳಿಂದ ಇರ್ಲಕ್ಷ್ಯಗೊಂಡು  ಈಗ ಶಿಥಿಲ ಹಂತದಲ್ಲಿದ್ದ ಇದನ್ನು ಶ್ರೀ ವೇ.ಮೂ ಮಧ್ವಾಚಾರ್ಯ ಜೋಷಿಯವರ ಕುಟುಂಬ ಜೀರ್ಣಗೊಳಿಸಿದೆ. ಈಗ ಇದರ ಇತಿಹಾಸ ಕರ್ನಾಟಕ ಗ್ಯಾಜೆಟ್ ನಲ್ಲಿ ಲಭ್ಯವಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂಬುದೇ ಹುನಗುಂದ ನಿವಾಸಿಗಳ ಆಶಯ.

  ದೇವಸ್ಥಾನದ ಕೆಲವು ಚಿತ್ರಗಳು-






ರಾಮಲಿಂಗೇಶ್ವರ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದ ಪಂಡಿತ್. ದಿ . ವೇ ಮೂ ಮಧ್ವಾಚಾರ್ಯ ಜೋಶಿಯವರು ( ನಿವೃತ್ತ ಡಿಡಿಪಿಆಯ್  ಬಿಜಾಪುರ , ಕರ್ನಾಟಕ )

Tuesday 20 November 2012

ಚಿತ್ರದಲ್ಲಿರುವವರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದ ಪ್ರಸ್ತುತಿ ಪೀಠ ವಿರಾಜಮಾನರಾದ ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳವರು. ಇವರು ಮಹಾ ವಿರಕ್ತರು , ಜ್ಞಾನಿಗಳು ಆಗಿದ್ದಾರೆ . ಇವರ ಪೂರ್ವಾಶ್ರಮದ ಹೆಸರು ಪಂ.ಅನಂತಾಚಾರ್ಯ ಗುಡಿ. ಇವರು ಪೂರ್ವಾಶ್ರಮದಲ್ಲಿ ಬೆಂಗಳೂರು ಮಹಾನಗರದಲ್ಲಿ ವ್ರುತ್ತಿನಿರತರಾಗಿದ್ದರು . ಇವರ ಲೌಕಿಕ ಜೀವನದ ಶಿಕ್ಷಣದಲ್ಲಿ ಔನ್ನತ್ಯ ಸಾಧಿಸಿದ್ದರು . ಇವರು LLB MBA BE ಡಿಗ್ರಿಗಳನ್ನೂ ಹೊಂದಿದ್ದರು . ಒಂದು ಬಾರಿ ಇವರ ಪೂರ್ವಾಶ್ರಮದ ಮನೆಯಲ್ಲಿ ( ಹಾವೆರಿಯಲ್ಲಿದೆ) ಶ್ರೀ ಮಠದ ಹಿಂದಿನ ಸ್ವಾಮಿಗಳಾದ ಶ್ರೀ ರಘುಪ್ರಿಯ ತೀರ್ಥರು ವೈಕುಂಠರಾಮದೇವರ ಪೂಜೆಗಾಗಿ ಬಂದಿದ್ದಾಗ ಅವರಲ್ಲಿ ಶಾಸ್ತ್ರಾಭ್ಯಾಸ ಮಾಡಬೇಕೆಂದು ನಿಶ್ಚಯಿಸಿ ಅವರೊಂದಿಗೆ 1990 ರಲ್ಲಿ ವೃತ್ತಿಯನ್ನು ತ್ಯಜಿಸಿ ನಡೆದೇ ಬಿಟ್ಟರು. ಸತತವಾಗಿ ರಾತ್ರಿ-ಹಗಲೆನ್ನದೆ ಶ್ರೀಮದಾಚಾರ್ಯರ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿ ಶ್ರೀ ರಘುಪ್ರಿಯ ತೀರ್ಥರಲ್ಲಿಯೇ ಇದ್ದರು . ಮುಂದೆ ಶ್ರೀಮಠದ ಉತ್ತರಾಧಿಕಾರಿ ನೇಮಕ ವಿಷಯ ಬಂದಾಗ ಉತ್ತರಾದಿ ಮಠಾಧೀಶ ಶ್ರೀ ಸತ್ಯಪ್ರಮೋದ ತೀರ್ಥರಲ್ಲಿ , ಅವರಿಗೆ ಪ್ರೀತ್ಯಾಸ್ಪದರಾದ ರಘುಪ್ರಿಯ ತೀರ್ಥರು ಮುಂದಿಟ್ಟಾಗ ಸತ್ಯಪ್ರಮೊದರು ಅನಂತಾಚಾರ್ಯರ ಹೆಸರಿಗೆ ಸಮ್ಮತಿ ಸೂಚಿಸಿದರು . ಮುಂದೆ ಇವರೇ ಶ್ರೀಮದಕ್ಷೋಭ್ಯತೀರ್ಥರ ತಪೋಭೂಮಿ ಯಾದ
ಕೂಡಲಿ ಕ್ಷೇತ್ರದಲ್ಲಿ ಶ್ರೀ ಶ್ರೀ ರಘುವಿಜಯ ತೀರ್ಥರಾಗಿ ಶ್ರೀ ರಘುಪ್ರಿಯರನ್ನು ಅತ್ಯಂತ ಪ್ರೀತಿಯಿಂದ ಸಲುಹಿ ಅವರಿಗೆ ಪ್ರೀತ್ಯಸ್ಪದ ರಾದರು. ಇವರು ತಮ್ಮ ಗುರುಗಳನ್ನು ಮಗುವಿನಂತೆ ನೋಡಿಕೊಂಡಿದ್ದಾರೆ . ಇವರ ಗುರುಗಳ ಹಾಗು ಇವರ ಶ್ರಮದಿಂದ ಇಂದು ಕೂಡ್ಲಿ ಮಠ ಜನಪ್ರಿಯ ವಾಗಿದೆ. ನಿನ್ನೆ ಶ್ರೀ ರಘುವಿಜಯರು ಧಾರವಾಡಕ್ಕೆ ಭೆಟ್ಟಿ ಕೊಟ್ಟಾಗ ಅವರಲ್ಲಿ ಮಂತ್ರಾಕ್ಷತೆ ತೆಗೆದುಕೊಂಡು ಅನುಗ್ರಹ ಪಡೆದೆ. ಅವರು ಈ ಹಿಂದೊಮ್ಮೆ ನಮ್ಮ ಮನೆಯಲ್ಲಿ ವೈಕುಂಠರಾಮ ದೇವರ ಪೂಜೆ ಇದ್ದಾಗ ಹೇಳಿದ್ದು ನೆನಪಾಯಿತು ಅದನ್ನೇ ಬರೆದೆ ..... :)


The swamiji in this picture is Shri Raghuvijaya Teertha of Kudali math . He is a great scholar and highly educated . His poorvashrama name is Pt.Anantacharya Gudi . He was engineer at Bangalore city . He was a highly educated in many degrees in his poorvashrama , attained great success in loukika jnana as well dharmika .In his poorvashrama HH is holder of degrees like LLB , MBA , BE. This shows his excellence and brilliance. Once Shri Raghupriya Teertha , the former pontiff of Shri kudali math visited the haveri and has done vaikuntha rama devara pooja in Gudi acharya's house. At that time Anantacharyaru attracted by Madhwa philosophy and left his job and joined shrimatha in 1990 . And until he completes his education of brahma jnana & madhwa shastras he never noticed days and nights . Finally he completed his studies of madhwa philosophy. Then raghupriya teertha recommended Anantacharya's name for Uttaradhikari of kudali math in front of his guru shrimaduttaradi mathadheesha satyapramoda teertha . SHri satyapramoda teertha said yes. Anantacharya became Shri Raghuvijaya teertha in Tapobhumi of Akshobhya teertha Kudali . From that day He is working for rise shri matha.He served his gurugalu like a child .Now Kudali matha is well known almost all Madhwas . Yesterday blessed by Raghuvijaya teertha . When Vaikuntha ramadevara pooja was in our home Shrigalu discussed this one with us so remembered those movements and wrote here :).

Friday 16 November 2012

 ಶ್ರೀ 1008 ಸತ್ಯಾತ್ಮ ತೀರ್ಥರೊಂದಿಗೆ ಅವರ ಪೂಜ್ಯ ಗುರುಗಳಾದ ಶ್ರೀ 1008 ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದರು. 

ಪರಮಪೂಜ್ಯ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ 1008 ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವದಂದು ಅವರ ಚರ್ಮ ಶ್ಲೋಕವನ್ನು ಪಠಿಸಿ ಕೃತಾರ್ಥರಾಗೋಣ.

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...