Sunday 11 March 2012

ಶ್ರೀ ಶ್ರೀ ಶ್ರೀ ವ್ಯಾಸರಾಜ ತೀರ್ಥ ಶ್ರೀಪಾದಂಗಳವರ ಆರಾಧನ ಮಹೊತ್ಸವ

ಕನ್ನಡ ರಾಜ್ಯ ರಮಾರಮಣ , ವಿಜಯನಗರ ಸಾಮ್ರಾಟ್ ಶ್ರೀ ಕೃಷ್ಣ ದೇವರಾಯನ ರಾಜ ಗುರುಗಳಾಗಿ , ಈತನ ಕಷ್ಟವನ್ನು ಪರಿಹರಿಸಿ , ವಿಜಯನಗರ ಸಾಮ್ರಾಜ್ಯ ಸಂಪತ್ತಿನ ಉತ್ತುಂಗಕ್ಕೆ ಏರಲು ಕಾರಣರಾದ , ಶ್ರೀ ಪ್ರಹ್ಲಾದ ರಾಜರ ಎರಡನೇ ಅವತಾರ , ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಹಿಂದಿನ ಅವತಾರ , ದ್ವೈತ ಸಿದ್ಧಾಂತದ ಪ್ರಚಾರವನ್ನು ದೇಶದ ಮೂಲೆ ಮೂಲೆಯಲ್ಲಿಯೂ ಮಾಡಿದ , ದ್ವೈತ ಸಿದ್ಧಾಂತಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಿಕ ( ಗುರುಗಳಾದ )  ಪೀಠ ವಿರಾಜಮಾನರಾದ , ಕುಂಭಕೋಣ ವಾಸಿ ಶ್ರೀ ವಿಜಯೀಂದ್ರ ತೀರ್ಥರು ಹಾಗು ದ್ವೈತ ಸಿದ್ಧಾಂತದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ಶ್ರೀ ಹಯಗ್ರೀವ ಪದಾಶ್ರಯ ಶ್ರೀ ವಾದಿರಾಜ ತೀರ್ಥರಂತಹ ಶಿಷ್ಯೋತ್ತಮರನ್ನು ಜಗತ್ತಿಗೆ ಕೊಟ್ಟ. ಜಗದ್ಗುರು  ಶ್ರೀಮನ್ ಮಧ್ವಾಚಾರ್ಯರ ಸಿದ್ಧಾಂತ ಪ್ರತಿಷ್ಠಾಪಕರಾಗಿ ಶ್ರೀ ಮಧ್ವರ ವಿಶೇಷ ಅನುಗ್ರಹಕ್ಕೆ ಪಾತ್ರರಾದ , ಶ್ರೀ ಭೂವೈಕುಂಠ ವಾಸಿ ಶ್ರೀ ತಿರುಪತಿ ವೆಂಕಟೇಶ್ವರನನ್ನು ನಿರಂತರ ೧೨ ವರ್ಷ ಪೂಜಿಸಿದ ( ಇಂದಿಗೂ ಇವರ ಪೂಜಾ ಪದ್ಧತಿಯಂತೆಯೇ ಅಲ್ಲಿ ಪೂಜಾದಿಗಳು ನಡೆಯುತ್ತಿವೆ) ಶ್ರೀ ಶ್ರೀ ಶ್ರೀ ವ್ಯಾಸರಾಜ ತೀರ್ಥ ಶ್ರೀಪಾದಂಗಳವರ ಆರಾಧನ ಮೊಹೊತ್ಸವ .
                                            ಪ್ರಹ್ಲಾದ ರಾಜಾಯ ವಿದ್ಮಹೇ ವ್ಯಾಸರಾಜಾಯ ಧೀಮಹಿ |
                                            ತನ್ನೋ ರಾಘವೇಂದ್ರ ಪ್ರಚೋದಯಾ|| ತ ||  
                                            ಅರ್ಥೀ ಕಲ್ಪಿತ ಕಲ್ಪೋ ಯಮ್ ಪ್ರತ್ಯರ್ಥಿ ಗಜಕೇಸರಿ |
                                            ವ್ಯಾಸ ತೀರ್ಥ ಗುರುರ್ಭೂಯಾತ್ ಅಸ್ಮದಿಷ್ಟಾರ್ಥ ಸಿದ್ಧಯೇ|| 
                                               

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...