ಮಹಾ ಮಹಿಮ ಶ್ರೀ ರಾಘವೇಂದ್ರ ಸ್ವಾಮಿ ಮಠದ, ಶ್ರೀ ರಾಯರ ಪೂರ್ವಜರಾದ ಶ್ರೀ ಶ್ರೀ ೧೦೦೮ ಶ್ರೀ ಜಿತಾಮಿತ್ರ ತೀರ್ಥರ ಆರಾಧನಾ ಸುದಿನ ಇಂದು.ದಿ.೨೩ ಪೂರ್ವರಾಧನೆಯಾದರೆ ದಿ.೨೪ ರಂದು ಮಧ್ಯರಾಧನೆ ದಿ.೨೫ ರಂದು ಉತ್ತರರಾಧನೆ ಶ್ರೀಗಳವರ ಮೂಲಸ್ಥಳವಾದ ಶ್ರೀ ಜಿತಮಿತ್ರ ಗಡ್ಡೆ ಎಂದೇ ಪ್ರಸಿದ್ಧವಾದ ದ್ವೀಪ ಪ್ರದೇಶದಲ್ಲಿ ಶ್ರೀಗಳವರ ಪರಮ ಸನ್ನಿಧಾನವುಳ್ಳ ವೃಕ್ಷಕ್ಕೆ ಶ್ರೀ ಸುಯತೀಂದ್ರ ತೀರ್ಥರು ಪೂಜೆ ಸಲ್ಲಿಸಿದರು . ಶ್ರೀ ಜಿತಮಿತ್ರ ತೀರ್ಥರ ಪರಮ ಪವಿತ್ರ ಸ್ಥಳವಾದ ಈ ಪ್ರದೆಶದಲ್ಲಿ ಶ್ರೀ ಸುಯತೀಂದ್ರ ತೀರ್ಥರು ಶ್ರೀ ಬ್ರಹ್ಮ ಕರರ್ಚಿತ ಪ್ರತಿಮೆ ಶ್ರೀಮನ್ಮೂಲ ರಾಮ ಪ್ರತಿಮೆ ಹಾಗು ಇತರೆ ಪ್ರತಿಮೆಗಳನ್ನು ಅರ್ಚಿಸಿದರು. ಶ್ರೀ ಜಿತಮಿತ್ರ ತೀರ್ಥರು ಮಹಿಮನ್ವಿತರಾಗಿದ್ದು ಅವರು ೭ ದಿನಗಳ ಕಾಲ ಪ್ರವಾಹದಲ್ಲಿ ಮುಳುಗಿದ್ದರು ಸಹ ದಿವ್ಯ ಶಕ್ತಿ ಹಾಗು ಆರಾಧ್ಯ ದೈವವಾದ ಶ್ರೀಮನ್ಮೂಲ ರಾಮನ ಅನುಗ್ರಹದಿಂದ ಮೆತ್ತೆ ಎದ್ದು ಬಂದು ಪವಾಡ ಮಾಡಿದರು . [ ಶ್ರೀ ಜಿತಾಮಿತ್ರರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ವೆಬ್ ವಿಳಾಸವನ್ನು ಸಂದರ್ಶಿಸಿ.]
ದ್ವೈತ ವೇದಾಂತವು ಜಗದ್ಗುರು ಶ್ರೀಮನ್ ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವ . 12 ನೆ ಶತಮಾನದಲ್ಲಿ ಮಧ್ಯಗೇಹ ಭಟ್ಟ ಹಾಗು ವೇದವತಿ ದಂಪತಿಗಳಿಗೆ ವಾಸುದೇವ ಎಂಬ ಹೆಸರಿನಿಂದ ಜನಿಸಿದ ಸಾಕ್ಷಾತ್ ವಾಯುದೆವರು , ಮುಂದೆ ಅಚ್ಯುತಪ್ರೇಕ್ಷ ( ಪ್ರಜ್ಞ ) ರಿಂದ ಸನ್ಯಾಸ ಸ್ವೀಕಾರ ಮಾಡಿ ಪೂರ್ಣಪ್ರಜ್ಞರಾಗಿ ಮುಂದೆ ವಾದಿವಿಜಯರಾಗಿ ಎಲ್ಲರಿಗು ಸದ್ವೈಷ್ಣವ ಸಿದ್ಧಾಂತವನ್ನು ಬೋಧಿಸಿ , ದ್ವೈತವನ್ನು ಪುನರುತ್ಥಾನಗೊಳಿಸಿ , ಎಲ್ಲರಿಗೂ ಆನಂದವನ್ನು ಉಂಟು ಮಾಡಿ ಆನಂದತೀರ್ಥರೆನಿಸಿ , ಮುಂದೆ ಅನೇಕ ಗ್ರಂಥರತ್ನಗಳನ್ನೂ ವಿರಚಿಸಿ, ಪರಿಶುದ್ಧ ತತ್ತ್ವವನ್ನು ಕರುಣಿಸಿ ಮಧ್ವಾಚಾರ್ಯರಾಗಿ ಲೋಕವನ್ನೇ ಸಲಹುತ್ತಿದ್ದಾರೆ.
Subscribe to:
Post Comments (Atom)
"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ
ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...
-
ಶ್ರೀಶ್ರೀವರದೇಂದ್ರತೀರ್ಥ ಗುರುಭ್ಯೋ ನಮಃ ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಮ್ । ವದಾನ್ಯಜನಸಿಂಹಾಯ ವರದೆಂದ್ರಾಯ ತೇ ನಮಃ ।। ಸನ್ಯಾಸಿಗಳ ಕರ್ತವ್ಯ ಪರಮತಖಂ...
-
ರಾಮನ ನೋಡಿರೈ.... ರಾಮನ ನೋಡಿರೈ .... ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರ...
-
ಶ್ರೀಮನ್ಮೂಲರಾಮೋ ವಿಜಯತೆ ಶ್ರೀಗುರುರಾಜೋ ವಿಜಯತೆ ಪೂರ್ವಾಶ್ರಮ- ...
Subscribe Us
Popular Posts
-
ಇಂದು ರಾಘವೇಂದ್ರ ತೀರ್ಥ ಗುರುಸರ್ವಭೌಮರು ವೇದಾಂತ ಸಾಮ್ರಾಜ್ಯಕ್ಕೆ ಅಧಿಪತಿಗಳಾದ ಸುದಿನ.. ಆಚಾರ್ಯರ , ಟೀಕಾರಾಯರ , ವಿಜಯೀಂದ್ರತೀರ್ಥರ, ತಮ್ಮ ಗುರುಗಳಾ...
-
ಪುಣ್ಯ ಸಂಪಾದನೆಗೆ ದಿವ್ಯ ಅವಕಾಶ - ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪರಮ ಕರುಣೆಗೆ ಪಾತ್ರರಾದ , "ಧರಣಿ ಮಂಡಲದಲ್ಲಿ ಖ್ಯಾತರಾದ " ಶ್ರೀ ಧೀರೇಂದ್ರ ...
-
Sriman Madhwacharya Moola Maha Samsthana Sri Raghavendra Swamy Matha, Mantralayam is well known for encouraging scholars and cond...
No comments:
Post a Comment