Wednesday 30 August 2023

"ಶ್ರೀರಾಘವೇಂದ್ರ ನಿಮ್ಮ ಚಾರು ಚರಣವ "



 * **  ಆರಾಧನಾ ವಿಶೇಷ  *** 


ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ ಅನನ್ಯ ಭಕ್ತರಾದ, ಶ್ರೀವರದೇಂದ್ರತೀರ್ಥರ ವಿದ್ಯಾಶಿಷ್ಯರಾದ,  ಶ್ರೀವಿಜಯದಾಸ-ಶ್ರೀಗೋಪಾಲದಾಸಾರ್ಯರ ಕರುಣಾಪಾತ್ರರಾದ, ಹರಿದಾಸಕುಲಸನ್ನುತರಾದ, ಅಪರೋಕ್ಷ ಜ್ಞಾನಿಗಳಾದ,  "ಶ್ರೀಶ್ರೀಜಗನ್ನಾಥದಾಸಾರ್ಯರು" ಭವಭಯನಿವಾರಕರಾದ, ಸಂಸಾರ ಸಾಗರದಿಂದ ನಮ್ಮನ್ನು ಪಾರುಗಾಣಿಸುವ ಮಹಾನ್ ಗುರುಗಳಾದ "ಶ್ರೀರಾಘವೇಂದ್ರಗುರುಸಾರ್ವಭೌಮ" ರನ್ನು ಕುರಿತು ರಚಿಸಿರುವ  "ಶ್ರೀರಾಘವೇಂದ್ರ ನಿಮ್ಮ ಚಾರು ಚರಣವ " ಎನ್ನುವ ಪ್ರಸಿದ್ಧ ಕೀರ್ತನೆಯಲ್ಲಿ "ಮೂಲರಾಮಾರ್ಚಕ"ರಾದ ಶ್ರೀರಾಘವೇಂದ್ರಪ್ರಭೃತಿಗಳನ್ನು"ಮೂಲರಾಮನ ಪಾದಕೀಲಾಲಜ ಮಧುಪ" ಎಂದು ಉತ್ಕೃಷ್ಟವಾಗಿ ವರ್ಣಿಸಿರುವ ಪರಿ.


ಶ್ರೀ ರಾಘವೇ೦ದ್ರ ನಿಮ್ಮ - ಚಾರುಚರಣವ
ಸಾರಿದೆ ಶರಣ ಮ೦ದಾರ ಕರುಣವ || ಪ ||
ಘೋರ ಭಯವನದಿ ತಾರಿಸು ತವಕದಿ
ಸೂರಿ ಸುಧೀ೦ದ್ರ ಕುಮಾರ ಉದಾರ || ಅ ||

ಮುನಿರಾಯ ನಿಮ್ಮ ಪಾದ - ವನರುಹ ಧ್ಯಾನ
ಪ್ರಣವ ಸುಸ್ತವನ - ಅರ್ಚನೆ ಮಾಳ್ಪ ನಾನಾ
ಜನರ ವಾ೦ಛಿತವೀವ ಗುಣಪೂರ್ಣ ಜ್ಞಾನ
ಧನವ ಪಾಲಿಸೆನಗೀ-ಕ್ಷಣ ನಿನ್ನವಾ
ಮನುಜನ ಪ್ರತಿದಿನ ದಿನದಿ ದಣಿಸುವುದು
ಘನವೇ ಗುರುವೇ ಪಾವನತರಚರಿತ || ೧ ||

"ಮೂಲರಾಮನಪಾದ- ಕೀಲಾಲಜ ಮಧುಪ"
ಬಾಲಕನ ಬಿನ್ನಪ - ಲಾಲಿಸೋ ಮುನಿಪ
ತಾಳಲಾರೆನೊ ತಾಪ - ತ್ರಯದ ಸ೦ತಾಪ
ಕೇಳೊ ವಿಮಲಜ್ಞಾನ - ಶೀಲ ಸ್ವರೂಪ
ಭೂಲಲನಾಧವ ಕೋಲನ೦ದನಾ
ಕೂಲಗ ವರಮ೦ತ್ರಾಲಯ ನಿಲಯ || ೨ ||

ಕಲಿಕಲ್ಮಷ ವಿದೂರ - ಕುಜನಕುಠಾರ
ನಳಿನಾಕ್ಷ ವಿಮಲ ಶ್ರೀ- ತುಲಸಿಯ ಹಾರ
ಗಳಶೋಭಿತ ಕಮ೦ಡಲು ದ೦ಡಧರ
ಅಲವಬೊಧರಮತ - ಜಲಧಿ ವಿಹಾರ
ಸುಲಲಿತ ಕರುಣಾ೦ಬುಧಿ 'ಜಗನ್ನಾಥವಿಠ್ಠಲ'-
ನೊಲುಮೆಯ ಪಡೆದಿಳೆಯೊಳು ಮೆರೆವ || ೩ ||




*** ಸದ್ವೈಷ್ಣವಕುಲಾವತಂಸರಾದ ಶ್ರೀಜಗನ್ನಾಥದಾಸಾರ್ಯರ ಸನ್ನಿಧಾನದಲ್ಲಿರುವ , ಶ್ರೀಜಗನ್ನಾಥದಾಸಾರ್ಯರ ಪುತ್ರರಾದ ಶ್ರೀದಾಮೋದರ ದಾಸಾರ್ಯರ ಸ್ವಹಸ್ತಲಿಖಿತ ಹಸ್ತಪ್ರತಿಯನ್ನೂ ಕೂಡ ಇಂದಿಗೂ ಕಾಣಬಹುದು.







ಸಂಗ್ರಹ: ಸಮೀರ ಜೋಶಿ

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...