Saturday, 12 August 2023

ಶ್ರೀಭುವನೇಂದ್ರತೀರ್ಥ ಶ್ರೀಪಾದಂಗಳವರು

    ಶ್ರೀಮದಾಚಾರ್ಯರ ಪೀಠದ ಮೇಲೆ ವಿರಾಜಮಾನರಾದ ಶ್ರೀಧೀರೇಂದ್ರತೀರ್ಥರ ವಿದ್ಯಾಶಿಷ್ಯರಾದವರು ಶ್ರೀಭುವನೇಂದ್ರತೀರ್ಥರು..



ಹೆಸರಿಗೆ ತಕ್ಕಂತೆ ಭೂಮಂಡಲದಲ್ಲೇ ಶ್ರೇಷ್ಠವಿದ್ವಾಂಸರಾಗಿ ಅನೇಕ ಭೂಪಾಲರಿಂದ ಮಾನಿತರಾದವರು.

ಶ್ರೀಮದಾಚಾರ್ಯರ ಪ್ರಣೀತವಾದ ಋಗ್ಭಾಷ್ಯ 40 ಋಕ್ಕುಗಳಿಗೆ ಅರ್ಥ ಹೇಳಿ ಶ್ರೀಮದಾಚಾರ್ಯರ ವಿಶೇಷಾನುಗ್ರಹಕ್ಕೇ ಪಾತ್ರರಾಗಿದ್ದ ಶ್ರೀಪಾದರು, ಶ್ರೀಮದಾಚಾರ್ಯರು ಗ್ರಂಥರೂಪದಲ್ಲಿ ಅರ್ಥವನ್ನು ಹೇಳದೇ ಬಿಟ್ಟ ಅನೇಕ ಋಕ್ಕುಗಳಿಗೆ ಅರ್ಥಹೇಳಿ ಶ್ರೀಮದಾಚಾರ್ಯರ ವಿಶೇಷಾನುಗ್ರಹಕ್ಕೆ ಪಾತ್ರರಾಗಿದ್ದ ಮಹಾನುಭಾವರು.

ಶ್ರೀಬ್ರಹ್ಮಕರಾರ್ಚಿತವಾದ ಮೂಲರಾಮದೇವರಿಗೆ ಸುಂದರವಾದ ಸುವರ್ಣಮಂಟಪವನ್ನು ಸಮರ್ಪಿಸಿ ವೈಭವಯುತವಾಗಿ ಸರ್ವೋತ್ತಮನ ಪೂಜೆಮಾಡಿದವರು ಶ್ರೀಭುವನೇಂದ್ರತೀರ್ಥರು..

ವಿದ್ಯಾಮಠದ ವಿದ್ವಚ್ಚಕ್ರವರ್ತಿ ಶ್ರೀವರದೇಂದ್ರರಲ್ಲಿ ಅಧ್ಯಯನ ಮಾಡಿ, ಶ್ರೀ ಧೀರೇಂದ್ರರ ಪರಮಾನುಗ್ರಹಕ್ಕೇ ಪಾತ್ರರಾಗಿದ್ದ ಶ್ರೀಜಗನ್ನಾಥದಾಸರು ಶ್ರೀಭುವನೇಂದ್ರ ತೀರ್ಥರ ಸಮಕಾಲೀನರು..

ದಾಸರು ಶ್ರೀಭುವನೇಂದ್ರ ತೀರ್ಥರ ಮಹಾಮಹಿಮೆಯನ್ನು ಬಹುವಾಗಿ ವರ್ಣಿಸುತ್ತಾರೆ.

""ಗಂಗಾ-ಪ್ರಯಾಗ, ಕಾಶಿ ಮುಂತಾದ ತೀರ್ಥಕ್ಷೇತ್ರಗಳ ಸಂದರ್ಶನದ ಫಲ ಕೇವಲ ಶ್ರೀ ಭುವನೇಂದ್ರ ತೀರ್ಥರ ದರ್ಶನಮಾತ್ರದಿಂದಲೇ ಲಭಿಸುವದು""ಎಂದು ಪರಮೋತೃಷ್ಟವಾದ ಅವರ ಮಹಿಮೆಯನ್ನು ತಿಳಿಸಿಕೊಟ್ಟಿದ್ದಾರೆ.
 

'ಜಗದ್ಗುರು ಶ್ರೀಸುಧೀಂದ್ರತೀರ್ಥರು'

 ರಾಜಾಧಿರಾಜ-ಕೋಟಿರ-ಕೋಟಿ-ಕೂಟಾರ್ಚಿತಾಂಘ್ರಯೇ ಶ್ರೀಸುಧೀಂದ್ರಯತಯೇ ನಮೋ ನಮಃ



'ಜಗದ್ಗುರು ಶ್ರೀಸುಧೀಂದ್ರತೀರ್ಥರು'


    ಶ್ರೀಹಂಸನಾಮಕನ ಸತ್ಪರಂಪರೆಯಲ್ಲಿ, ಶ್ರೀಮನ್ಮಧ್ವಾಚಾರ್ಯರಿಂದ ಹದಿನೈದನೇಯ ಪೀಠಾಧಿಪತಿಗಳಾಗಿ ಶ್ರೀಮನ್ಮಧ್ವಮತವನ್ನು ವಿಶಿಷ್ಟ ಆಯಾಮದಲ್ಲಿ ಪ್ರತಿಷ್ಠಾಪನೆ ಮಾಡಿದವರೇ ಶ್ರೀಸುಧೀಂದ್ರತೀರ್ಥರು.

    ಸಕಲವಿದಜನಕುಮುದವನ ಕೌಮುದೀಶರಾದ, ಭಗವಂತನ ವಿಶಿಷ್ಟಕರುಣೆಗೆ ಪಾತ್ರರಾದ, ಶ್ರೀಸುರೇಂದ್ರತೀರ್ಥರೇ ಇವರ ಆಶ್ರಮ ಗುರುಗಳು, ಚತುಷ್ಷಷ್ಟಿಕಲಾಪ್ರಾವೀಣ್ಯದಿಂದ ಆಸ್ತಿಕ್ಯವನ್ನು ಪುಷ್ಟೀಕರಿಸಿದ, ಚತುರಧಿಕಶತಗ್ರಂಥರತ್ನಪ್ರಣೇತರಾದ (104 ಗ್ರಂಥಗಳನ್ನು ಕರುಣಿಸಿದ),ಚಾತುರ್ಯಕ್ಕೆ ಹೆಸರಾದ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರು ಇವರ ಗುರುಗಳಾದರೇ,ನಾಸ್ತಿಕ್ಯವನ್ನು ಒದ್ದೋಡಿಸಿದ, ಆಸ್ತಿಕರ ಆರಾಧ್ಯರಾದ, ಶ್ರೀಮನ್ಮಧ್ವಮತಸಂವರ್ಧಕರಾದ ಶ್ರೀಮನ್ಮಂತ್ರಾಲಯಪ್ರಭುಗಳು,ಹಾಗೂ ತಪಸ್ವಿಗಳಾದ ಗ್ರಂಥಕಾರರಾದ ಶ್ರೀಯಾದವೇಂದ್ರತೀರ್ಥರು ಇವರ ವಿದ್ಯಾಶಿಷ್ಯರು, ಆಶ್ರಮಶಿಷ್ಯರು.

    ಇಂತಹ ಲೋಕೋತ್ತರ ಕಾರ್ಯಗಳನ್ನು ಮಾಡಿದ ಗುರುಗಳನ್ನೂ, ಶಿಷ್ಯರನ್ನು ಪಡೆದ ಸ್ವಯಂ ಲೋಕೋತ್ತರ ಮಹಿಮೆಯನ್ನು ಹೊಂದಿದ ಮಹಾನುಭಾವರು ಶ್ರೀಸುಧೀಂದ್ರತೀರ್ಥರು.



ಶ್ರೀಸುಧೀಂದ್ರತೀರ್ಥರ ಆಶ್ರಮ:

ಶ್ರೀವ್ಯಾಸರಾಜರು ಬಾಲಸನ್ಯಾಸಿಗಳಾದ ಶ್ರೀವಿಷ್ಣುತೀರ್ಥರನ್ನು ಮೂಲರಾಮದೇವರ ಪೂಜಾರ್ಥವಾಗಿಯೇ ಶ್ರೀಸುರೇಂದ್ರ ತೀರ್ಥರಿಗೊಪ್ಪಿಸಿದಾಗ, ಸಂತುಷ್ಟರಾದ ಶ್ರೀಸುರೇಂದ್ರತೀರ್ಥರು ಅವರನ್ನು ಶ್ರೀಮಠದ ಸಂಪ್ರದಾಯಾನ್ವಯ ವಿದ್ಯುಕ್ತವಾಗಿ ದಂಡಪಲ್ಲಟಿಸಿ ಶ್ರೀವಿಜಯೀಂದ್ರತೀರ್ಥರು ಎಂಬ ಅಭಿದಾನವನ್ನು ದಯಪಾಲಿಸಿ ತಮ್ಮ ಪಟ್ಟದ ಶಿಷ್ಯರನ್ನಾಗಿ ಸ್ವೀಕಾರ ಮಾಡಿದರು.

ಶ್ರೀಮಧ್ವಾಚಾರ್ಯರ ವಿದ್ಯಾಸಿಂಹಾನಾಧೀಶ್ವರರಾದ ಶ್ರೀಸುಧರ್ಮೇಂದ್ರತೀರ್ಥ ಶ್ರೀಪಾದಂಗಳವರು : ಶ್ರೀಕೃಷ್ಣಾವಧೂತರು ಕಂಡಂತೆ


ಶ್ರೀಮಧ್ವಾಚಾರ್ಯರ ವಿದ್ಯಾಸಿಂಹಾನಾಧೀಶ್ವರರಾದ ಶ್ರೀಸುಧರ್ಮೇಂದ್ರತೀರ್ಥ ಶ್ರೀಪಾದಂಗಳವರು : ಶ್ರೀಕೃಷ್ಣಾವಧೂತರು ಕಂಡಂತೆ

ಶ್ರೀಮಧ್ವಾಚಾರ್ಯರ ವಿದ್ಯಾಸಿಂಹಾನಾಧೀಶ್ವರರಾದ ಶ್ರೀರಾಘವೇಂದ್ರಸ್ವಾಮಿಗಳವರ ಸದ್ವಂಶದಲ್ಲಿ ಉದಿಸಿದ ಪೂರ್ಣಚಂದ್ರಮರಾದ ಶ್ರೀಸುಧರ್ಮೇಂದ್ರತೀರ್ಥ ಶ್ರೀಪಾದಂಗಳವರು.

ಶ್ರೀಕೃಷ್ಣಾವಧೂತರು ಶ್ರೇಷ್ಠವಿದ್ವಾಂಸರು. ಶ್ರೀರಾಘವೇಂದ್ರಸ್ವಾಮಿಗಳಲ್ಲಿ ಅನನ್ಯವಾದ ಭಕ್ತಿಯನ್ನು ಮಾಡಿದವರು. ಒಂದು ಕಾಲದಲ್ಲಿ ವಿಲಾಸಿ ಜೀವನ ನಡೆಸಿದ್ದ ಅವರು ಶ್ರೀರಾಘವೇಂದ್ರಗುರುಗಳ ದಿವ್ಯ-ಪಾದ- ಪದ್ಮಾರಾಧನೆಯಲ್ಲಿಯೇ ಜೀವನ ಸವೆಸಿದ್ದು ಇತಿಹಾಸ. ಶ್ರೀರಾಯರ ಕೃಪಾಶೀರ್ವಾದದಿಂದ ಅನೇಕ ಮಂತ್ರಗಳ ಸಿದ್ಧಿಯನ್ನು ಪಡೆದು, ಪಾಂಡಿತ್ಯವನ್ನು ಸಂಪಾದಿಸಿ ಅನೇಕ ಕೃತಿಗಳನ್ನು ರಚಿಸಿದವರು. ಸಂಸ್ಕೃತದ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳ ಕೃತಿಗಳನ್ನು ರಚಿಸಿದ ಕೀರ್ತಿ ಇವರದು. ಶ್ರೀರಾಘವೇಂದ್ರತಂತ್ರ, ಶ್ರೀರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ (ಬಹುತೇಕ ಎಲ್ಲರೂ ಕೇಳಿರಲೇ ಬಹುದಾದ ಶ್ರೀರಾಘವೇಂದ್ರಾರ್ಯ ಪಾಹಿಪ್ರಭೋ... ಎನ್ನುವ ಕೃತಿ) ಮುಂತಾದ ಅಪೂರ್ವ ಗ್ರಂಥಗಳ ಕರ್ತೃಗಳು ಇವರು.

ಇವರು ಶ್ರೀಮದಾಚಾರ್ಯರ ಸತ್ಪರಂಪರೆಯಲ್ಲಿ ಶ್ರೀಸುಜ್ಞಾನೇಂದ್ರತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀಸುಧರ್ಮೇಂದ್ರತೀರ್ಥರ ಸಮಕಾಲೀನರು. ಶ್ರೀಸುಧರ್ಮೇಂದ್ರಸ್ವಾಮಿಗಳವರ ವಿಶಿಷ್ಟವಾದ ಆದರ್ಶ ಸಂನ್ಯಾಸ, ಶ್ರೇಷ್ಠ ವೈರಾಗ್ಯ, ಅಪ್ರತಿಮ ಪಾಂಡಿತ್ಯ, ಅನುಪಮ ಶ್ರೀಮನ್ಮೂಲರಾಮ- ದಿಗ್ವಿಜಯರಾಮ- ಜಯರಾಮ- ವೇದವ್ಯಾಸದೇವರ ವೈಭವದ ಮಹಾಪೂಜೆಯನ್ನು ಕಣ್ಣಾರೆ ಕಂಡವರು ಶ್ರೀಕೃಷ್ಣಾವಧೂತರು.

ಶ್ರೀಸುಧರ್ಮೇಂದ್ರತೀರ್ಥರ ದಿವ್ಯ-ಭವ್ಯ ವ್ಯಕ್ತಿತ್ವದ ಪರಿಚಯ ಮಾಡಿಸಲೋಸುಗ ಶ್ರೀಕೃಷ್ಣಾವಧೂತರು "ಶ್ರೀಸುಧರ್ಮೇಂದ್ರಮಹೋದಯಃ" ಎಂಬ ಕೃತಿಯನ್ನೇ ರಚನೆ ಮಾಡಿದ್ದಾರೆ. 

ಅತೋSಹಂ ಸುಧರ್ಮೇಂದ್ರಯತಿನಃ ಮುಹುಃ ಶ್ರಾವಂ ಶ್ರಾವಂ ಗುಣಮಣಿಮನರ್ಘ್ಯಂ ಚಿರತರಂ ಸ್ತೋತುಂ ಎಂದು ತ್ರಿಲೋಕ ವ್ಯಾಪಿಯಾದ ಶ್ರೀಸುಧರ್ಮೇಂದ್ರತೀರ್ಥರ ಗುಣಗಳನ್ನು ಕೇಳಿ ಕೇಳಿ ಮತ್ತೆ ಮತ್ತೆ ಸ್ತುತಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಶ್ರೀಸುಧರ್ಮೇಂದ್ರಸ್ವಾಮಿಗಳ ಬಗ್ಗೆ ಹೇಳುತ್ತ,

"ಸುಧರ್ಮೇಂದ್ರತೀರ್ಥರ ಶ್ರೀರಾಮದೇವರ ಪೂಜೆಯನ್ನು ನೋಡಲು ಸಾಕ್ಷಾತ್ ಇಂದ್ರದೇವರೇ ಭುವಿಗೆ ಬರುತ್ತಾರೆ"

 

ಸೋದಾಪುರಾಧೀಶ ಭಾವೀಮುಖ್ಯಪ್ರಾಣರಾದ ಶ್ರೀಮದ್ವಾದಿರಾಜಪ್ರಭುಗಳು

ಶ್ರೀಮನ್ಮಧ್ವಾಚಾರ್ಯರ ಪೂರ್ವಾಶ್ರಮದ ಅನುಜರಾಗಿ ಅವತರಿಸಿ, ಶ್ರೀಮನ್ಮಧ್ವಾಚಾರ್ಯರಿಂದ ಉಪದೇಶವನ್ನು ಪಡೆದು ಅವರ ಪದಕಮಲಗಳನ್ನು ಸೇವಿಸಿ ಧನ್ಯರಾದ ಮಾಹಾಭಾಗ್ಯಶಾಲಿಗಳು ಶ್ರೀವಿಷ್ಣುತೀರ್ಥರು.

ಶ್ರೀವಿಷ್ಣುತೀರ್ಥರ ಚರಿತ್ರೆಯನ್ನು, ಅವರ ಮಹಿಮೆಯನ್ನು ಅತ್ಯಂತ ಭಕ್ತ್ಯಾದರಗಳಿಂದ ಶ್ರೀನಾರಾಯಣಪಂಡಿತಾಚಾರ್ಯರು ಶ್ರೀಸುಮಧ್ವವಿಜಯದಲ್ಲಿ ಉಲ್ಲೇಖಿಸಿದ್ದಾರೆ. ಇವರ ಭವ್ಯಸ್ವರೂಪದ ರೋಮಾಂಚನಕಾರಿ ವರ್ಣನೆಯನ್ನು ಮಾಡಿದ್ದಾರೆ. ಶ್ರೀಮದಾಚಾರ್ಯರು ಹಾಗೂ ಶ್ರೀವಿಷ್ಣುತೀರ್ಥರನ್ನು "ವೇದಾಂತಗುರುಸೋದರ"ರು ಎಂದು ಉಲ್ಲೇಖಿಸಿದ್ದಾರೆ. ಅವರ ತೀರ್ಥಯಾತ್ರೆ, ತಪೋವೈಭವ, ಆ ತಪ್ಪಸ್ಸಿನ ತೀವ್ರತೆ, ಅಸಂಪ್ರಜ್ಞಾತಸ್ಥಿತಿಯಲ್ಲಿ ಅವರು ಮಾಡಿದ ಭಗವದ್ದರ್ಶನ, ಈ ಎಲ್ಲ ಅಪೂರ್ವಸಿದ್ಧಿಗಳನ್ನು ಹೊಂದಿದ ಮಹಾನುಭಾವರು ಶ್ರೀವಿಷ್ಣುತೀರ್ಥರು.

ಶ್ರೀಮಧ್ವಾನುಜಾಚಾರ್ಯರು ಎಂದೇ ಮಾಧ್ವಪರಂಪರೆಯ ಜ್ಞಾನಿವರೇಣ್ಯರಿಂದ ಸ್ತುತಿಸಲ್ಪಡುವ ಮಹಾ ತಪಸ್ವೀಶ್ರೇಷ್ಠರಾದ, ದೈವಾಂಶಸಂಭೂತರಾದ ಶ್ರೀವಿಷ್ಣುತೀರ್ಥರೇ ಅಷ್ಟಮಠಗಳಲ್ಲಿ ಒಂದಾದ 'ಕುಂಭಾಶಿ' ಮಠಕ್ಕೂ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೂ ಮೂಲಪುರುಷರು.

ಅವರ ದಿವ್ಯಪರಂಪರೆಯಲ್ಲಿ ಶ್ರೀವಾಗೀಶತೀರ್ಥ ಶ್ರೀಮಚ್ಚರಣರ ಕರಕಮಲಸಂಜಾತರಾಗಿ ಧರೆಗಿಳಿದು ಬಂದವರೇ ಭಾವೀಹನೂಮಚ್ಚಕ್ರವರ್ತಿಗಳಾದಂತಹ ಶ್ರೀಶ್ರೀವಾದಿರಾಜತೀರ್ಥ ಗುರುಸಾರ್ವಭೌಮರು.

ಆಚಾರ-ವಿಚಾರ, ಸಂಪ್ರದಾಯಗಳ ಪರಿಪಾಲನೆ, ತಪಶ್ಚರ್ಯೆ ಎಲ್ಲದರಲ್ಲೂ ಪ್ರತಿಯೊಂದು ಚರ್ಯೆಯಲ್ಲೂ ಪೂರ್ವಾಚಾರ್ಯರ, ವಿಶೇಷವಾಗಿ ಮಧ್ವಸಾದೃಶ್ಯ.

ಸಶರೀರ ವೃಂದಾವನಪ್ರವೇಶ. ಸಂಸ್ಕೃತ- ಕನ್ನಡ - ತುಳು ಭಾಷೆಗಳಲ್ಲಿ ಶತಾಧಿಕ ಗ್ರಂಥಗಳ ನಿರ್ಮಾಣ. ವೇದಾಂತದಲ್ಲಿ ಭಾಷ್ಯಗ್ರಂಥಗಳು, ಟೀಕಾಗ್ರಂಥಗಳು, ಟಿಪ್ಪಣೀಗ್ರಂಥಗಳು, ಕಾವ್ಯಗ್ರಂಥಗಳು, ವಿಮರ್ಶಾಗ್ರಂಥಗಳು, ಸ್ತೋತ್ರಸಾಹಿತ್ಯ, ಹೀಗೇ ಬಹುಪ್ರಕಾರವಾಗಿರುವ ಅವರ ಗ್ರಂಥರಚಾನಾ ಸಾಮರ್ಥ್ಯ. ಗ್ರಂಥಗಳಲ್ಲಿ ತೋರುವ ಸಂಪ್ರದಾಯ-ಸಿದ್ಧಾಂತ ನಿಷ್ಠೆ. ಪ್ರಮೇಯಗಳನ್ನು ಹೇಳುವ ನಿರ್ದುಷ್ಟವಾದ, ಮನೋಹರ ಶೈಲಿ.

ವಿಶ್ವಾಸವಿಟ್ಟವರಿಗೆ ಎಚ್ಚರದಂತೆ ಕಾಣುವ, ವಿಶ್ವಾಸವಿಲ್ಲದವರಿಗೆ ಚಾಟಿ ಏಟಿನಂತೆ ತೋರುವ ಅವರ ವಾಣಿವಿಲಾಸ. ವಿಷಯಸಾಧನೆಗೆ ಪೂರಕವಾಗಿ ಯುಕ್ತಿಯನ್ನು ಹಣೆದು ಸವಿಯನ್ನು ಉಣಬಡಿಸುವ ಅವರ ನಿರಂಕುಶ ವಾಗ್ಝರಿ. ಸಾಹಿತ್ಯ-ಕಾವ್ಯ-ನಾಟಕ-ಅಲಂಕಾರಾದಿ ಶಾಸ್ತ್ರಗಳಲ್ಲಿ ಅವರಿಗಿರುವ ನಿಪುಣತೆ. ವೇದಾಂತಾದಿ ಶಾಸ್ತ್ರಗಳಲ್ಲಿ ಅವರಿಗಿರುವ ಅದ್ಭುತ ಹಿಡಿತ. ಗ್ರಂಥಗಳಲ್ಲಿ ಯುಕ್ತಯುತವಾಗಿ ಅವರು ಉದಾಹರಿಸುವ, ಶತಮಾನಗಳೂ ಉರುಳಿದರೂ ನಿತ್ಯನೂತನವೆನಿಸುವ ಅವರ ಹಿತೋಪದೇಶಗಳು. ಚಿರಸ್ಥಾಯಿಯಾಗಿರುವಂತಹ ಅವರ ಕಾಲದಲ್ಲಿ ಅವರು ಮಾಡಿದ ಲೋಕೋತ್ತರ ವ್ಯಾಪಾರಗಳು. ಇವಲ್ಲದಕ್ಕೂ ಶ್ರೀವಾದಿರಾಜ ಗುರುಸರ್ವಭೌಮರಿಗೇ , ಶ್ರೀವಾದಿರಾಜರಗುರು ಸಾರ್ವಭೌಮರೇ ಸಾಟಿ!!!


ಅವರ ಈ ಭವ್ಯಮಹಿಮೆಯ ದ್ಯೋತಕವಾಗಿಯೇ ವೃತ್ತರತ್ನಸಂಗ್ರಹದಲ್ಲಿ,

"ಸವಿನೋದಂ ಸಾಟ್ಟಹಾಸಂ ಸಸ್ಮಿತಂ ಸುಸ್ವರಾನ್ವಿತಮ್ |

ಸರಹಸ್ಯಂ ಸಪ್ರಮಾಣಂ ವಾದಿರಾಜವಚೋsಮೃತಮ್ ||"

Wednesday, 9 August 2023

ಶ್ರೀವರದೇಂದ್ರ ಗುರುವೈಭವ - ಶ್ರೀವರದೇಂದ್ರರ ಪುಣೆ ದಿಗ್ವಿಜಯಯಾತ್ರೆಯ ಪ್ರಸಂಗ

ಶ್ರೀಶ್ರೀವರದೇಂದ್ರತೀರ್ಥ ಗುರುಭ್ಯೋ ನಮಃ 


ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಮ್ । 

ವದಾನ್ಯಜನಸಿಂಹಾಯ ವರದೆಂದ್ರಾಯ ತೇ ನಮಃ ।। 


    ಸನ್ಯಾಸಿಗಳ  ಕರ್ತವ್ಯ ಪರಮತಖಂಡನಪೂರ್ವಕ-ಸ್ವಮತಪ್ರತಿಷ್ಠಾಪನವೇ ಆಗಿದೆ. ಶ್ರೀವರದೇಂದ್ರ ಗುರುರಾಜರು ಇದನ್ನು ಮೈಗೂಡಿಸಿಕೊಂಡು ಸದ್ವೈಷ್ಣವಸಿದ್ಧಾಂತಪ್ರತಿಷ್ಠಾಪನಾಚಾರ್ಯ ಎನ್ನುವ ಬಿರುದಿಗೆ ಅನ್ವರ್ಥದಂತಿದ್ದವರು.


ಶ್ರೀವರದೇಂದ್ರತೀರ್ಥರ ಮೂಲ ವೃಂದಾವನ, ಪುಣೆ 

ಶ್ರೀವರದೇಂದ್ರರ ಸನ್ನಿಧಿಯಲ್ಲಿ  ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥರು 


    ಅವರು ಒಮ್ಮೆ ಪುಣ್ಯನಗರಿ ( ಪುಣೆ) ಗೆ ದಿಗ್ವಿಜಯ ಮಾಡಿಸಿದರಂತೆ. ಅಲ್ಲಿನ ದಿಗ್ವಿಜಯ ಯಾತ್ರೆ ಶ್ರೀವರದೇಂದ್ರರು ಸಾಧಿಸಿದ ದಿಗ್ವಿಜಯಗಳಲ್ಲಿ ಅತ್ಯಂತ ಪ್ರಸಿದ್ಧ ಜನನಿತವಾದ ದಿಗ್ವಿಜಯ.  ಇದನ್ನು ಶ್ರೀವದೇಂದ್ರರನ್ನು ಸಾಕ್ಷಾತ್ತಾಗಿ ಕಂಡ, ಅವರ ಅನುಗ್ರಹ ಪಡೆದ ಧನ್ಯಾತ್ಮರಾದ ಶ್ರೀಪ್ರಾಣೇಶದಾಸರು ಹಾಗೂ ಮುಂದಿನ ಪೀಳಿಗೆಯವರಾದ ಶ್ರೀವರದೇಶವಿಠಲರು ದಾಖಲಿಸಿದ್ದಾರೆ. ಶ್ರೀವರದೇಶದಾಸರಂತೂ ಈ ಸಂಪೂರ್ಣ ಘಟನೆಯ ಚಿತ್ರಣವನ್ನೇ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ.

"ಇನಿತು ಪೇಳಿ ಸಂಸೇವಿತರಾಗುತ ಮುನಿಗಳು ತೆರಳಿದರು ಹರುಷದಲಿ ।। 

ಪುಣೆಯ ಸೇರಿದರು ದುರ್ವಾದಿಯ ಮತವನು ದಿಗ್ವಿಜಯಿಪ ಇಚ್ಛೆಯಲೀ ।। " 

ಎಂದು ಶ್ರೀವರದೇಂದ್ರ ಪುಣೆ ದಿಗ್ವಿಜಯಯಾತ್ರೆಯ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. 

ಇದು ಕೇವಲ ದಂತೆಕಥೆಯಾಗಿರದೇ ಇತಿಹಾಸದ ಪುಟಗಳಲ್ಲಿ ದಾಖಲಾದ ನಿಚ್ಚಳ ಚರಿತ್ರೆಯಾಗಿದೆ. ಇತಿಹಾಸದ ಪುಟಗಳಲ್ಲಿ ಹೊಕ್ಕು ನೋಡಿದಾಗ, ಈ ಪ್ರಭುಣೆ ರಾಮಶಾಸ್ತ್ರಿಗಳ ಬಗ್ಗೆ ಹಲವು ಆಯಾಮಗಳಲ್ಲಿ ಮಾಹಿತಿ ದೊರೆಯುತ್ತದೆ.  

ಈ ಪ್ರಭುಣೆ ರಾಮಶಾಸ್ತ್ರಿಗಳು ೧೮ನೇ ಶತಮಾನದ ಉತ್ತರಾರ್ಧದ ಕಾಲಘಟ್ಟದಲ್ಲಿ ಮರಾಠಾ ಸಾಮ್ರಾಜ್ಯದ ಪೇಶ್ವೆಯವರ ಮುಖ್ಯ ನ್ಯಾಯಾಧೀಶರಾಗಿದ್ದವರು ( ಅಥವಾ ಪಂತ್ ನ್ಯಾಯಾಧೀಶ್).

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...